ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿ ನಾಪತ್ತೆ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಇಲ್ಲಿನ ಗುರುದೇವ ಕಾಲೇಜು ಬಳಿಯ ನಿವಾಸಿ ತೋಪೆ ಗೌಡರ ಪುತ್ರ ಪುನೀತ್ ಎಸ್.ಟಿ. (21ವ)ರವರು ಕಾಣೆಯಾದ ಘಟನೆ ಸೆ.4 ರಂದು ನಡೆದಿದೆ.

3ನೇ ವರ್ಷದ ಬಿ.ಎಸ್.ಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಈತ ತನ್ನ ತಂಗಿ ಕಾಲೇಜಿಗೆ ತೆರಳಿದ ಬಳಿಕ ಒಬ್ಬನೇ ಮನೆಯಲ್ಲಿದ್ದು ತಾಯಿ ಸಕಲೇಶಪುರದಿಂದ ಬಂದು ನೋಡುವಾಗ ಹಾಲ್‌ನ ಬೆಡ್ ಮೇಲೆ ಒಂದು ಪತ್ರ ಬರೆದಿಟ್ಟು ಹೋಗಿದ್ದಾನೆ.

ಆತನನ್ನು ಪಕ್ಕದ ಮನೆಯ ಗಿರಿಜಾ ಅವರು ಮಧ್ಯಾಹ್ನ ನೋಡಿದ್ದು ಬಳಿಕ ಕಾಣೆಯಾಗಿದ್ದಾನೆ ಎನ್ನಲಾಗಿದೆ. ಈತನ ಕುರಿತು ಸಂಬಂಧಿಕರ ಮನೆಯ ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ತಾಯಿ ಗೀತಾ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!