ನೀರ್ನಳ್ಳಿ ಗಣಪತಿಯವರಿಗೆ ಉಂಡೆಮನೆ ಗೌರವ ಪ್ರಶಸ್ತಿ

Suddi Udaya

ಬೆಳ್ತಂಗಡಿ: ಉಂಡೆಮನೆ ಶಂಭು ಭಟ್ಟರ ಸವಿನೆನಪಿಗಾಗಿ ನೀಡಲಾಗುವ ಈ ವರ್ಷದ ಉಂಡಮನೆ ಪ್ರಶಸ್ತಿಗೆ ಯಲ್ಲಾಪುರ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ, ಖ್ಯಾತ ವ್ಯಂಗ್ಯ ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಸೀತಾರಾಮ ಹೆಗಡೆ(ನೀರ್ನಳ್ಳಿ ಗಣಪತಿ)ಯವರು ಆಯ್ಕೆಯಾಗಿದ್ದಾರೆ.

ವ್ಯಂಗ್ಯ ಚಿತ್ರಕಲಾವಿದರಾಗಿರುವ ಇವರ ಸರ್ವತೋಮುಖ ಕಲಾಸೇವೆಯನ್ನು ಗುರುತಿಸಿ ಈ ವರ್ಷದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆಯೆಂದು “ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆ”ಯ ಸಂಚಾಲಕ ಉಂಡೆಮನೆ ಶಂ.ವಿಶ್ವೇಶ್ವರ ಭಟ್ಟರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Comment

error: Content is protected !!