ನೆರಿಯ: ಶ್ರೀ ಕ್ಷೇತ್ರ ಗ್ರಾ.ಯೋಜನೆಯಿಂದ ಸಹಾಯಧನ ಹಸ್ತಾಂತರ

Suddi Udaya

ನೆರಿಯ ವಲಯದ ಬೈಲಂಗಡಿ ಕಾರ್ಯಕ್ಷೇತ್ರದ ಗಾನದಕೊಟ್ಟಿಗೆ ಎಂಬಲ್ಲಿ ವಾಸವಾಗಿರುವ ಗುಲಾಬಿಯವರು ತೋಟದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಕುಸಿದುಬಿದ್ದು ತೀವ್ರವಾದ ರಕ್ತಸ್ರಾವ ಆಗಿ ಮಲಗಿದಲ್ಲೇ ಇದ್ದು, ಇವರಿಗೆ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ರೂ. 40000 ಮೊತ್ತದ ಸಹಾಯಧನವನ್ನು ಅವರ ತಾಯಿ ಸುನಂದಾವರಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಡಿ. ಎ. ರಹಿಮಾನ್, ಬೈಲಂಗಡಿ ಒಕ್ಕೂಟದ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿ, ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮುತ್ತೇಸರರಾದ ಕಮಲಾಕ್ಷ ಪಾದೆ, ಜನಜಾಗೃತಿ ವಲಯಸಮಿತಿ ಮಾಜಿ ಅಧ್ಯಕ್ಷರಾದ ಅಶೋಕ್ ಜೈನ್, ಪದಾಧಿಕಾರಿಯಾದ ಒಬಯ್ಯಾಗೌಡ, ವಲಯ ಮೇಲ್ವಿಚಾರಕರಾದ ರಾಜೇಶ್ ಉಪಸ್ಥಿತರಿದ್ದರು.

Leave a Comment

error: Content is protected !!