ಶಿಬಾಜೆ ಪತ್ತಿಮಾರಿನ ರಾಘವೇಂದ್ರ ಅಭ್ಯಂಕರ್ ತೋಟಕ್ಕೆ ತಡರಾತ್ರಿ ಕಾಡಾನೆ ದಾಳಿ: ಪಸಲು ಬರುವ 10 ತೆಂಗಿನ ಮರ 40 ಅಡಿಕೆ ಮರ ನಾಶ

Suddi Udaya

ಶಿಬಾಜೆ: ಪತ್ತಿಮಾರಿನ ರಾಘವೇಂದ್ರ ಅಭ್ಯಂಕರ್ ಎಂಬುವರ ತೋಟಕ್ಕೆ ತಡರಾತ್ರಿ ಕಾಡಾನೆ ದಾಳಿ ಮಾಡಿದ್ದು ಪಸಲು ಬರುವ 10 ತೆಂಗಿನ ಮರ 40 ಅಡಿಕೆ ಮರ ಹಾಗೂ ಬಾಳೆಗಿಡಗಳನ್ನೂ ನಾಶ ಮಾಡಿದೆ.ಸುಮಾರು ಒಂದು ವರ್ಷದ ಹಿಂದೆಯೂ ಇವರ ಮನೆಗೆ ಇದೇ ರೀತಿ ಕಾಡಾನೆ ದಾಳಿ ಮಾಡಿ ಅಪಾರ ಹಾನಿಯನ್ನು ಉಂಟು ಮಾಡಿರುತ್ತದೆ.

ಸುಮಾರು ಎರಡು ವರ್ಷಗಳಿಂದ ಈಚೆ ಈ ಭಾಗದಲ್ಲಿ ಹಲವಾರು ಬಾರಿ ಬೇರೆ ಬೇರೆ ಕೃಷಿ ಜಾಗಗಳಿಗೆ ದಾಳಿ ಮಾಡಿದ್ದು, ರೈತರು ನಿದ್ದೆ ಗೆಡಿಸಿದೆ. ಜನರು ಭಯಭೀತರಾದ್ದು, ಇದೇ ರೀತಿಯಾದರೆ ಮುಂದೆ ಎಲ್ಲಾ ಕೃಷಿ ಕಾರ್ಯಗಳಿಗೂ ತೊಂದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ತೊಂದರೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

Leave a Comment

error: Content is protected !!