ಶಿಬಾಜೆ: ಪಡಂತ್ತಾಜೆಯಲ್ಲಿ ಒಂಟಿ ಸಲಗ ದಾಳಿ: ಬಾಳೆಗಿಡ, ಅಡಿಕೆ ಗಿಡಗಳಿಗೆ ಹಾನಿ

Suddi Udaya

ಶಿಬಾಜೆ ಗ್ರಾಮದ ಪಡಂತ್ತಾಜೆ ಎಂಬಲ್ಲಿ ಜರ್ನಾದನ ಗೌಡ ಹಾಗೂ ಲೋಕೇಶ್ ರವರ ತೋಟಕ್ಕೆ ಕಾಡಾನೆ ದಾಳಿ ಮಾಡಿ ಅಪಾರ ಕೃಷಿ ನಾಶ ಮಾಡಿದ ಘಟನೆ ಸೆ.10 ರಂದು ತಡರಾತ್ರಿ ನಡೆದಿದೆ.

ಮೂರು ನಾಲ್ಕು ದಿನಗಳಿಂದ ಶಿಬಾಜೆ ಪರಿಸರದಲ್ಲಿ ತಿರುಗಾಡುತ್ತಿರುವ ಒಂಟಿಸಲಗವು ಸೆ.10 ರಂದು ಮೂರು ನಾಲ್ಕು ಮನೆಗಳ ತೋಟಗಳಿಗೆ ಹಾನಿ ಮಾಡಿದ್ದು ಬಾಳೆಗಿಡ, ಅಡಿಕೆ ಗಿಡಗಳಿಗೆ ನಾಶ ಮಾಡಿದೆ.

ಇಂದು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶಿಲನೆ ನಡೆಸಿದರು.

Leave a Comment

error: Content is protected !!