ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಜೇಸಿ ಸಪ್ತಾಹ

Suddi Udaya

ಕೊಕ್ಕಡ: ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಜೇಸಿ ಸಪ್ತಾಹವನ್ನು ಸ.ಕಿ.ಪ್ರಾ. ಶಾಲೆ ಕೊಳಕ್ಕೆ ಬೈಲು ಎಂಬಲ್ಲಿ
ವಿದ್ಯಾರ್ಥಿ ನಾಯಕಿ ಕು. ತನುಶ್ರೀ ದೀಪ ಬೆಳಗಿಸಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರ, ಶಿಶಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶೋಧರ ಭಟ್ ಆಗಮಿಸಿ ಶುಭ ಹಾರೈಸಿದರು. ಎಲ್ಲಾ ಮಕ್ಕಳಿಗೂ ಅಕ್ಷರ ದೀವಿಗೆ ಕಾರ್ಯಕ್ರಮದಂತೆ ಲೈಬ್ರರಿ ಪುಸ್ತಕ ವಿತರಣೆ ಮಾಡಲಾಯಿತು. ಶಾಲೆಗೆ ಕಿಟ್ ವಿತರಣೆ ಮಾಡಲಾಯಿತು.

ಮುಖ್ಯ ಶಿಕ್ಷಕಿ ಶ್ರೀಮತಿ ಸುಗುಣಾ, ಹಿರಿಯ ಸದಸ್ಯರಾದ ಜೋಸೆಫ್ ಪಿರೇರಾ ಶುಭ ಹಾರೈಸಿದರು.

ಜೆಸಿಂತಾ ಡಿ ಸೋಜ ಜೇಸಿ ವಾಣಿ ವಾಚಿಸಿದರು. ಗೌರವ ಶಿಕ್ಷಕಿಯಾದ ಶ್ರೀಮತಿ ಸುಮಾ ಉದ್ಘಾಟಕರ ಪರಿಚಯ ಮಾಡಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ, ನಿಕಟಪೂರ್ವ ಅಧ್ಯಕ್ಷ ಶ್ರೀಧರ ರಾವ್ ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕ ಸಂತೋಷ್ ವಂದಿಸಿದರು.

Leave a Comment

error: Content is protected !!