April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ:ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಕಲಾ ಸಿಂಧು ಸಾಂಸ್ಕೃತಿಕ ಸಂಘದ ವತಿಯಿಂದ ‘ವೃಕ್ಷಾಬಂಧನ’ ಕಾರ್ಯಕ್ರಮ

ಉಜಿರೆ: ಪ್ರಕೃತಿಯೊಂದಿಗಿನ ಮನುಜರ ಬಾಂಧವ್ಯದ ಸಂಕೇತವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಮರಕ್ಕೆ ರಾಖಿ ಕಟ್ಟುವುದು ಉತ್ತಮ ಕಾರ್ಯ. ಪರಿಸರವನ್ನು ಉಳಿಸುವ ಮತ್ತು ಪೋಷಿಸುವ ಕಾರ್ಯ ನಮ್ಮದಾಗಿದೆ. ಮಾನವರು ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಸಂಬಂಧದ ಬಗ್ಗೆ ವಿದ್ಯಾರ್ಥಿಗಳ ತಿಳುವಳಿಕೆಯನ್ನು ಈ ವೃಕ್ಷಾಬಂಧನ ಕಟ್ಟುವ ಕಾರ್ಯ ಸುಂದರವಾಗಿ ಪ್ರತಿಬಿಂಬಿಸಿದೆ” ಎಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆಯ ವಿಜ್ಞಾನ ಶಿಕ್ಷಕಿ ರೂಪಶ್ರೀ ಹೇಳಿದರು.

ಅವರು ಸೆ.11 ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಇಲ್ಲಿ ಕಲಾ ಸಿಂಧು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ‘ವೃಕ್ಷಾಬಂಧನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವೇ ತಯಾರು ಮಾಡಿದ ಪರಿಸರಸ್ನೇಹಿ ರಾಖಿಯನ್ನು ಗಿಡಗಳಿಗೆ ಕಟ್ಟಿ ವೃಕ್ಷ ಸಂರಕ್ಷಣೆ ಪ್ರತಿಜ್ಞೆ ಮಾಡಿದರು.

ವಿದ್ಯಾರ್ಥಿನಿ ಅಹಲ್ಯ ಪರಿಸರ ಭಾವಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ರಿತಿಕಾ ವೃಕ್ಷಾಬಂಧನದ ಮಹತ್ವ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ವಹಿಸಿದ್ದರು.

ವೇದಿಕೆಯಲ್ಲಿ ಕಲಾ ಸಂಘದ ಸಂಯೋಜಕ ಶಿಕ್ಷಕಿ ಸುಮಾ ಶ್ರೀನಾಥ್, ಕಲಾಸಿಂಧು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ವಿದ್ಯಾರ್ಥಿನಿ ಶ್ರೀಪ್ರಿಯಾ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಚನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅನ್ನಪೂರ್ಣ ಸ್ವಾಗತಿಸಿ, ಸಮೃದ್ಧಿ ವಂದಿಸಿದರು.

Related posts

ಬೆಳ್ತಂಗಡಿ : ನಾಳೆ(ಜ.4) ವಿದ್ಯುತ್ ನಿಲುಗಡೆ

Suddi Udaya

ಮೂಲಭೂತ ಸೌಕರ್ಯ ವಂಚಿತ ಪುಳಿತ್ತಡಿ, ಎರ್ಮಲೆ ಪ್ರದೇಶ ಆದಿವಾಸಿ ಕುಟುಂಬಗಳಿಂದ ನೋಟಾ ಅಭಿಯಾನಕ್ಕೆ ನಿರ್ಧಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಭೇಟಿ

Suddi Udaya

ತೆಂಕಕಾರಂದೂರು ವಿಷ್ಣು ಮೂರ್ತಿ ಮಕ್ಕಳ ಕುಣಿತ ಭಜನೆ ತರಬೇತಿ ಉದ್ಘಾಟನೆ

Suddi Udaya

ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹತೆಗೊಳಿಸಿರುವುದಕ್ಕೆ ಖಂಡನೆ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮೌನ ಪ್ರತಿಭಟನೆ

Suddi Udaya

ಮುಂಬೈ, ಗೋವಾ, ಮಹಾರಾಷ್ಟ ನಬಾರ್ಡ್ ಬ್ಯಾಂಕ್ ಅಧಿಕಾರಿಯವರಿಂದ ಸಿಡ್ಬಿ ಸಾಲ ಪಡೆದು ಸ್ವ ಉದ್ಯೋಗ ನಡೆಸುತ್ತಿರುವ ಘಟಕಕ್ಕೆ ಭೇಟಿ

Suddi Udaya
error: Content is protected !!