ಇಂದಬೆಟ್ಟು: ಗೊಂಚಲು ಸ್ತ್ರೀ ಶಕ್ತಿ ಮಹಾಸಭೆ

Suddi Udaya

ಇಂದಬೆಟ್ಟು: ಇಲ್ಲಿಯ ಗೊಂಚಲು ಸ್ತ್ರೀ ಶಕ್ತಿ ಮಹಾಸಭೆಯು ಶ್ರೀಮತಿ ಚಂದ್ರಕಾತಿಯವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೆ.11 ರಂದು ನಡೆಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾರವರು ಉಪಸ್ಥಿತಿ ಇದ್ದು ಶುಭಹಾರೈಸಿದರು. ವಿನೋದ್ ಪ್ರಸಾದ್ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಕಪಿಲಾ ಸ್ತ್ರೀ ಶಕ್ತಿ ವಿವಿದೋದ್ದೇಶ ಸಹಕಾರ ಬ್ಯಾಂಕ್ ಹಾಗೂ ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಬಗ್ಗೆ ವಿನಯರವರು ಮಾಹಿತಿ ನೀಡಿದರು.


ಸಂಜೀವಿನಿ ಎಮ್.ಬಿ.ಕೆ ವಾಣಿಶ್ರೀ, ಅಧ್ಯಕ್ಷೆ ಹೇಮಲತಾ, ಕಾರ್‍ಯಕರ್ತೆ ರೋಹಿಣ, ಅಂಗನವಾಡಿ ಕಾರ್‍ಯಕರ್ತೆಯರು, ಸರ್ವ ಸ್ತ್ರೀ ಶಕ್ತಿ ಸದಸ್ಯರು ಭಾಗವಹಿಸಿದರು.


ನೂತನ ಪದಾಧಿಕಾರಿಗಳ ಅಧ್ಯಕ್ಷರಾಗಿ ಚಂದ್ರಕಾಂತಿ ಪುನರಾಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಮಮತ, ಕೋಶಾಧಿಕಾರಿಯಾಗಿ ಲಕ್ಷ್ಮೀ ಆಯ್ಕೆಯಾದರು.
ಕವಿತಾ ವರದಿ ವಾಚಿಸಿ, ಅಂ.ಕಾರ್‍ಯಕರ್ತೆ ಶಶಿಕಲಾ ಕಾರ್‍ಯಕ್ರಮ ನಿರೂಪಿಸಿ, ಪಾಸು ವಂದಿಸಿದರು.

Leave a Comment

error: Content is protected !!