25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ ರಂಜಿತ್ ಕುಮಾರ್ ಅವರಿಗೆ ಡಾಕ್ಟರೇಟ್ ಪದವಿ

ಬೆಳ್ತಂಗಡಿ : ಲಾಯಿಲ ಗ್ರಾಮದ ಕಾಶಿಬೆಟ್ಟುವಿನ ಶ್ರೀಮತಿ ಮಲ್ಲಿಕಾರವರ ಮಗ ರಂಜಿತ್ ಕುಮಾರ್ ಆರ್ ಇವರು, ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್ ಬೆಂಗಳೂರು ಇಲ್ಲಿ, ಡಾ. ಸುಜಿತ್ ಸರ್ಕಾರ್ ಅವರ ಮಾರ್ಗದರ್ಶನದಲ್ಲಿ, ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ನಿಂದ ಪಿಹೆಚ್ ಡಿ ಪದವಿಯನ್ನು ಪಡೆದಿರುತ್ತಾರೆ.

ಇವರು ಸಂತ ತೆರೇಸಾ ಪ್ರೌಢಶಾಲೆ, ವಾಣಿ ಪದವಿ ಪೂರ್ವ ಕಾಲೇಜು ಹಾಗೂ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಹಳೆ ವಿದ್ಯಾರ್ಥಿ.

ಸಂಶೋಧನಾ ಅವಧಿಯಲ್ಲಿ 15 ಸಂಶೋಧನಾ ಲೇಖನಗಳು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.
ಸಂಶೋಧನೆ ಆಧಾರಿತವಾಗಿ ರಾಷ್ಟ್ರೀಯ ಮಟ್ಟದ ಡಾ. ಕೆ.ವಿ ರಾವ್ ಸೈಂಟಿಫಿಕ್ ಸೊಸೈಟಿಯವರು ಪ್ರತಿ ವರ್ಷ ಕೊಡಲ್ಪಡುವ “ಅತ್ಯುತ್ತಮ ಸಂಶೋಧನಾ ಪ್ರಶಸ್ತಿ ” 2023 ರಲ್ಲಿ ಪಡೆದಿರುತ್ತಾರೆ. ಕೇಂದ್ರ ಸರಕಾರದ, ಡಿಪಾರ್ಟ್ಮೆಂಟ್ ಆಫ್ ಸೈನ್ಸ್ & ಟೆಕ್ನಾಲಜಿಯಿಂದ, “ಕ್ಲಿಷ್ಟವಾದ ಸಂಶೋಧನಾ ವಿಷಯಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡುವುದು” ಎಂಬ ವಿಷಯದ ಬಗ್ಗೆ ಬರೆದ ಲೇಖನಕ್ಕೆ “ಬೆಸ್ಟ್ ಸೈನ್ಸ್ ಸ್ಟೋರಿ ಅವಾರ್ಡ್” ಪಡೆದುಕೊಂಡಿರುತ್ತಾರೆ.

Related posts

ಒಟ್ಲ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಚಿತ್ತರಂಜನ್ ಕಂಕನಾಡಿ ದಂಪತಿಗಳಿಂದ ಸಂಕ್ರಮಣ ಪೂಜೆ

Suddi Udaya

ಮೊಗ್ರು ನಿವಾಸಿ ಶತಾಯುಷಿ ನೀಲಮ್ಮ ನಿಧನ

Suddi Udaya

ಮುಂಡಾಜೆ: ಕವಿ ವಿಶ್ರಾಂತ ಶಿಕ್ಷಕ ಶಂಕರ್ ಎನ್.ತಾಮನ್ಕರ್ ರವರ ಸೀತಾ ರಾಮಾಯಣ ಮತ್ತು ಮಕರಂದ ಕವನ ಸಂಕಲನಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ

Suddi Udaya

ಅಳದಂಗಡಿ: ಮಾರ್ನಿಂಗ್ ಕ್ರಿಕೆಟರ್ಸ್ ನಿಂದ ರಸ್ತೆ ರಿಪೇರಿ, ಚರಂಡಿ ದುರಸ್ಥಿ

Suddi Udaya

ಧರ್ಮಸ್ಥಳ : ಚರಂಡಿಗೆ ಉರುಳಿ ಬಿದ್ದ ವಾಹನಗಳು

Suddi Udaya

ಮರಳಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಶಾಸಕ ಹರೀಶ್ ಪೂಂಜ ಒತ್ತಾಯ

Suddi Udaya
error: Content is protected !!