ಮದ್ದಡ್ಕ ವಿ.ಹಿಂ.ಪ. ಭಜರಂಗದಳ ಘಟಕದಿಂದ ಅನಾರೋಗ್ಯ ಪಿಡೀತರಿಗೆ ಆರ್ಥಿಕ ನೆರವು

Suddi Udaya

ಮದ್ದಡ್ಕ : ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ ಘಟಕದ ವತಿಯಿಂದ ಅನಾರೋಗ್ಯ ಪೀಡಿತ 5 ಕುಟುಂಬಕ್ಕೆ ರೂ 40 ಸಾವಿರ ಧನಸಹಾಯವನ್ನು ವಿತರಿಸಲಾಯಿತು.

ಮಚ್ಚಿನ ಗ್ರಾಮದ ಗುರುಬೊಟ್ಟು ಮೋಹನಂದ ಪೂಜಾರಿ, ಕುವೆಟ್ಟು ಗ್ರಾಮದ ಡೀಕಯ್ಯ ಮೂಲ್ಯ ಪಯ್ಯೊಟ್ಟು,
ಕೊರಗಪ್ಪ ಪೂಜಾರಿ ನೇರಳಕಟ್ಟೆ, ಪಡಂಗಡಿ ಗ್ರಾಮದ ಕೊಂಡೆಟ್ಟು, ಪ್ರಕಾಶ್ ಭಂಡಾರಿ, ರಮಾನಂದ ಕುಲಾಲ್
ಮಂಜಿ ಬೆಟ್ಟು ಪುತ್ಯೆ ದರ್ಖಾಸು, ಇವರಿಗೆ ಧನಸಹಾಯದ ಚೆಕ್ಕನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ವಿ ಎಚ್ ಪಿ ಮದ್ದಡ್ಕ ಘಟಕದ ಕಾರ್ಯದರ್ಶಿ ವಿನೋದ್ ಶೆಣೈ ಮದ್ದಡ್ಕ, ಭಜರಂಗದಳ ಮದ್ದಡ್ಕ ಘಟಕದ ಸಂಚಾಲಕ ಯಶೋಧರ ಶೆಟ್ಟಿ ಅರ್ಕಜೆ ಹಾಗೂ ಸಚಿನ್ ವರ್ಧನ್ ಸಬರಬೈಲು, ಮನೋಹರ ಕೇದಳಿಕೆ, ದೀಕ್ಷಿತ್ ರಾಜ್ ಬಲ್ಪುಂಜ, ಶಿವರಾಮ ಶೆಟ್ಟಿ ಉಪ್ಪಡ್ಕ, ಹರೀಶ್ ಕೋಟ್ಯಾನ್ ಮದಡ್ಕ ಉಪಸ್ಥಿತರಿದ್ದರು.

Leave a Comment

error: Content is protected !!