ಹೊಸಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಹೊಸಂಗಡಿ ವಲಯದ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆ ಹೊಸಂಗಡಿಯಲ್ಲಿ ನಡೆಯಿತು.
ಸಂಪನ್ಮೂಲಗಳ ವ್ಯಕ್ತಿ ಶಿಬಿರಾಧಿಕಾರಿ ರಾಜೇಶ್ ರವರು ಸ್ವಾಸ್ತ್ಯ ಸಮಾಜದಲ್ಲಿ ಮಕ್ಕಳ ಕೊಡುಗೆ ಬಗ್ಗೆ ಮಾಹಿತಿ ನೀಡಿದರು.
ಜನಜಾಗೃತಿ ವೇದಿಕೆ ತಾಲೂಕು ಸದಸ್ಯರಾದ ವಿಠ್ಠಲ್ ಸಿ ಪೂಜಾರಿ ಹಾಗೂ ಶಾಲಾ ಅಧ್ಯಾಪಕರಾದ ಸುಧೀರ್ , ಮೇಲ್ವಿಚಾರಕರು ಶ್ರೀಮತಿ ವೀಣಾ ಹಾಗೂ ಸೇವಾಪ್ರತಿನಿಧಿಯಾದ ಮಮತಾ, ಮಮತಾ ಉಪಸ್ಥಿತರಿದ್ದರು,











