ಪತ್ರಕರ್ತ ರಂಜಿತ್ ಮಡಂತ್ಯಾರ್ ರಿಗೆ ರಾಜ್ಯ ಮಟ್ಟದ ಯುವ ಸಾಧಕ ಪ್ರಶಸ್ತಿ

Suddi Udaya

ಮಡಂತ್ಯಾರು: ಪತ್ರಿಕಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿ, ಅಪಾಯ ಅನುಭವನ್ನು ಹೊಂದಿರುವ, ತನಿಖಾ ವರದಿಗಾರರಾಗಿ, ಕ್ರೈಮ್ ಸುದ್ದಿಗಳಿಂದ ಜನಜನಿತರಾಗಿ ಸಾಧನೆಯನ್ನು ಮಾಡಿದ ಯುವ ಬರಹಗಾರ ರಂಜಿತ್ ಮಡಂತ್ಯಾರ್‌ವರಿಗೆ ಮಡಂತ್ಯಾರು ಜೇಸಿಐ ಸಂಸ್ಥೆ ಕೊಡಮಾಡುವ ‘ರಾಜ್ಯ ಮಟ್ಟದ ಪ್ರತಿಷ್ಠಿತ ಜೇಸಿ ಯುವ ಸಾಧಕ ಪ್ರಶಸ್ತಿಗೆ’ ಭಾಜನರಾಗಿದ್ದಾರೆ.

ಕ್ರೈಮ್ ಲೋಕದ ದಂತಕತೆಯಾಗಿರುವ ಬರಹಗಾರ ಸಾಹಿತಿ ಪತ್ರಕರ್ತ ರವಿ ಬೆಳಗೆರೆಯವರ ಜೊತೆಗೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸೇವೆ ಸಲ್ಲಿಸಿರುವ ,ರಾಜ್ಯದ ಪ್ರತಿಷ್ಠಿತ ದೃಶ್ಯ ಮಾಧ್ಯಮಗಳಲ್ಲಿ ಕೆಲಸಮಾಡಿ ಅಪಾರ ಅನುಭವವಿರುವ ರಂಜಿತ್‌ರವರಿಗೆ ಇತ್ತಿಚೇಗೆ ಮಡಂತ್ಯಾರಿನಲ್ಲಿ ನಡೆದ ಜೇಸಿ ಸಪ್ತಾಹದಲ್ಲಿ ಅವರ ಸಾಧನೆಯನ್ನು ಗುರುತಿಸಿ, ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Leave a Comment

error: Content is protected !!