ತೋಟತ್ತಾಡಿ ಗ್ರಾಮ ಸಮಿತಿ ಹಾಗೂ ಬೂತ್ ಸಮಿತಿಗಳ ವತಿಯಿಂದ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಎಂ ನಾಗೇಶ್ ಕುಮಾರ್ ಗೌಡರಿಗೆ ಸನ್ಮಾನ

Suddi Udaya

ತೋಟತ್ತಾಡಿ ಗ್ರಾಮ ಸಮಿತಿ ಹಾಗೂ 77,78,79,80 ಬೂತ್ ಸಮಿತಿಗಳ ಪರವಾಗಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಎಂ ನಾಗೇಶ್ ಕುಮಾರ್ ಗೌಡ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಪ್ರದೀಪ್ ಕೆ ಸಿ, ತಾಲೂಕು ಗ್ರಾಮಿಣ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್ ಬಿ., ಮಹಿಳಾ ಕಾಂಗ್ರೇಸ್ ನ ಅಧ್ಯಕ್ಷೆ ಶ್ರೀಮತಿ ನಮಿತಾ ಕೆ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ರಜತ್ ಗೌಡ, ಮುಖಂಡರಾದ ಖಲಂದರ್ ಶಾ ಕೊಕ್ಕಡ, ಮುಂಡಾಜೆ ಸಹಕಾರಿ ಸಂಘದ ನಿರ್ದೇಶಕರಾದ ಶಶಿಧರ ಪೂಜಾರಿ, ತೋಟತ್ತಾಡಿ ಮಹಿಳಾ ಹಾಲು ಉತ್ಪಾದಕ ಸಂಘದ ನಿರ್ದೇಶಕರುಗಳಾದ ಶ್ರೀಮತಿ ಚಂದ್ರಾವತಿ, ಶ್ರೀಮತಿ ಪ್ರಜೀನ, ತಾಲೂಕು ಮಹಿಳಾ ಕಾಂಗ್ರೇಸ್ ಕಾರ್ಯದರ್ಶಿ ಸಿಂಧು ಪುದುವೆಟ್ಟು ,ಬೂತ್ ಅಧ್ಯಕ್ಷರುಗಳಾದ ಕಿಟ್ಟು ಮುಗೇರ, ಹನೀಫ , ಸಿಜೊ ಎಂ ಜೆ, ಮಾಜಿ ಸದಸ್ಯರಾದ ಶಾಜಿ ತೋಪ್ಪಿಲ್ ಉಪಸ್ಥಿತರಿದ್ದರು.

ಪಕ್ಷ ಸಂಘಟನೆಯ ಕುರಿತು ಕಾರ್ಯಕರ್ತರ ಅಭಿಪ್ರಾಯಗಳನ್ನು ಆಲಿಸಲಾಯಿತು. ಅಧ್ಯಕ್ಷರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಅಮಿತ್ ಡಿ ಕೆ ರವರು ಸ್ವಾಗತಿಸಿ, ಶಾಜಿ ತೋಪ್ಪಿಲ್ ರವರು ಧನ್ಯವಾದವಿತ್ತರು. ಇಸುಬು ಅಂಕೊತ್ಯಾರು ಸ್ಥಳ ದಾನವನ್ನು ಒದಗಿಸಿದ್ದರು.

Leave a Comment

error: Content is protected !!