23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ.26-28: ಅಳದಂಗಡಿ ಅಂಗತ್ಯಾರು ಬಾಕಿಮಾರು ಶ್ರೀ ಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ವಾರ್ಷಿಕ ನೇಮೋತ್ಸವ

ಅಳದಂಗಡಿ: ಅಳದಂಗಡಿ ಅಂಗತ್ಯಾರು ಬಾಕಿಮಾರು ಶ್ರೀ ಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ಮಾ.26ರಿಂದ ಮಾ.28 ರವರೆಗೆ 77ನೇ ವರ್ಷದ ವಾರ್ಷಿಕ ನೇಮೋತ್ಸವವು ಜರಗಲಿರುವುದು.

ಮಾರ್ಚ್ 26ರಂದು ಬೆಳಿಗ್ಗೆ ಶ್ರೀ ಸೋಮನಾಥೇಶ್ವರಿ ದೇವಸ್ಥಾನದಿಂದ ತೀರ್ಥ ತರುವುದು. ದೈವಗಳ ಭಂಡಾರ ಶುದ್ಧೀಕರಿಸಿ ಗಣಹೋಮ, ಅಂಗತ್ಯಾರು ಬಾಕಿಮಾರು ಗದ್ದೆಯಲ್ಲಿ ಮುಗೇರ ದೈವಗಳಿಗೆ ಮಂಜ ಸೇವೆಯು ನಡೆಯಲಿರುವುದು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಾಂಜೆ ಕುಡ್ಡಲಬೆಟ್ಟು ದೈವಸ್ಥಾನದಿಂದ ದೈವಗಳ ಭಂಡಾರ ಬರುವುದು, ಓಂಕಾರೇಶ್ವರ ಭಜನಾ ಮಂಡಳಿ ಪಜಿರಡ್ಕ ಕಲ್ಮಂಜ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ನೆಲ್ಯರಾಯ ಪಂಜುರ್ಲಿ ನೇಮೋತ್ಸವ, ರಾತ್ರಿ12 ಕ್ಕೆ ಮಹಾಕಾಳಿ ದೈವದ ನೇಮೋತ್ಸವ ನಡೆಯಲಿರುವುದು. ಮಾ. 27ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಶ್ರೀ ಸೋಮನಾಥೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಬ್ರಹ್ಮ ಮೊಗೇರ ದೈವಗಳ ನೇಮೋತ್ಸವ, ರಾತ್ರಿ 12 ಕ್ಕೆ ತಂಗಡಿ ತನ್ನಿ ಮಾಣಿಗ ದೈವದ ನೇಮೋತ್ಸವ ಜರುಗಲಿರುವುದು.

ಮಾರ್ಚ್ 28ರಂದು ಬೆಳಿಗ್ಗೆ ಅಲೇರ ಪಂಜುರ್ಲಿ ದೈವದ ನೇಮೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಸಂಜೆ ದೈವಗಳ ಭಂಡಾರ ಇಳಿಯುವುದು ಎಂದು ಸಂಘಟಕರು ತಿಳಿಸಿದ್ದಾರೆ.

Related posts

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ (ಸಅ) ಅವಹೇಳನ ಪೋಸ್ಟ್ ಪ್ರಕರಣ; ಚೇತನ್ ಹೊದ್ದೆಟ್ಟಿ ವಿರುದ್ಧ ಅಕ್ಬರ್ ಬೆಳ್ತಂಗಡಿಯಿಂದ ದೂರು ದಾಖಲು

Suddi Udaya

ಸ್ತುತಿರವರ ಹುಟ್ಟುಹಬ್ಬದ ಪ್ರಯುಕ್ತ ಉರುಂಬಿದೊಟ್ಟು ಅಂಗನವಾಡಿಯ ಸುತ್ತ ಗಿಡಗಂಟಿಗಳ ಸ್ವಚ್ಛತೆ ಹಾಗೂ ತೆಂಗಿನ ಗಿಡ ನೆಡುವ ಮೂಲಕ ಆಚರಣೆ

Suddi Udaya

ವೇಣೂರು: ಲಯನ್ಸ್ ಕ್ಲಬ್ ನಲ್ಲಿ ಕಾರ್ಗಿಲ್ ದಿನಾಚರಣೆ

Suddi Udaya

ಹೊಸಂಗಡಿ: ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆ ಕುರಿತು ತರಬೇತಿ

Suddi Udaya

ಅರಸಿನಮಕ್ಕಿ ವಲಯದ ಶ್ರೀ ಕ್ಷೇ.ಧ. ಗ್ರಾ. ಯೋಜನೆಯ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಜೂ.18-23: ಉಜಿರೆಯಲ್ಲಿ ಬೆಂಗಳೂರು ಜೀವನ ಕಲೆ ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya
error: Content is protected !!