ಬೆಳ್ತಂಗಡಿ ಟೀಂ ಅಭಯಹಸ್ತ ಇದರ ಸಮಾಲೋಚನಾ ಸಭೆ

Suddi Udaya

ಬೆಳ್ತಂಗಡಿ : ಸೇವೆ ಸಂಘಟನೆ ಸಾಮರಸ್ಯದ ಧ್ಯೇಯದೊಂದಿಗೆ ಕಳೆದ 6 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ಬೆಳ್ತಂಗಡಿ ಇದರ ಸಮಿತಿಯ ಸಮಾಲೋಚನಾ ಸಭೆಯು ಜರುಗಿತು.

ಸಭೆಯಲ್ಲಿ ಮುಂದಿನ ಆವೃತ್ತಿಯ ಕ್ರೀಡಾಕೂಟದ ರೂಪುರೇಷೆ, ಸದಸ್ಯತ್ವ, ಸೇವಾಯೋಜನೆಗಳ ವಿಸ್ತರಣೆಯ ಬಗೆಗೆ ಸಮಾಲೋಚಿಸಲಾಯಿತು.

ಸಭೆಯಲ್ಲಿ ಸಮಿತಿಯ ಪ್ರಧಾನ ಸಂಚಾಲಕ ಸಂದೀಪ್ ನೀರಲ್ಕೆ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಎ, ಕ್ರೀಡಾ ಸಂಯೋಜಕ ಜಯಾನಂದ ಎ, ಸಹ ಸಂಚಾಲಕರಾದ ಪ್ರಸಾದ್ ಬಿಕ್ಕಿರ, ಜೀವನ್ ಅರ್ವ, ಸಿರಾಜ್ ಕಟ್ಟೆ, ಪ್ರಶಾಂತ್, ಶೈಲೇಶ್ ಅರ್ವ, ಪದಾಧಿಕಾರಿಗಳು, ಸಲಹೆಗಾರರು, ಸರ್ವಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!