ಉಜಿರೆ ಶ್ರೀ ಧಂ.ಮಂ. ಪ.ಪೂ ಕಾಲೇಜು : ಎನ್ನೆಸ್ಸೆಸ್ ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನ

Suddi Udaya

ಉಜಿರೆ: ರಾಷ್ಟ್ರೀಯ ಯುವ ವ್ಯವಹಾರ ಸಚಿವಾಲಯ ಮತ್ತು ಕ್ರೀಡಾ ಇಲಾಖೆಯ ಕರೆಯ ಮೇರೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಘಟಕದ ನಾಯಕಿ ದಕ್ಷಾ ನೇತೃತ್ವದಲ್ಲಿ ಉಜಿರೆ ಪರಿಸರದ ಪ್ಲಾಸ್ಟಿಕ್ ಹಾಗೂ ಇತರೆ ಕಸಗಳ ಸಂಗ್ರಹ ಮತ್ತು ಸ್ಥಳೀಯ ಬಸ್ ತಂಗುದಾಣ ಸ್ವಚ್ಛತೆಯನ್ನು ಮಾಡಿದರು.

ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.

Leave a Comment

error: Content is protected !!