31.8 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುತ್ಲೂರು: ಪುನರ್ವಸತಿ ಹೊಂದಿರುವ ಫಲಾನುಭವಿಗಳಿಗೆ ಉಚಿತ ಕೃಷಿ ಉಪಕರಣಗಳ ವಿತರಣೆ

ಕುತ್ಲೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಕುಟುಂಬಗಳಿಗೆ ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿ ಇಂಡಿಯ ಬೆಂಗಳೂರು, ಇದರ ಆಶ್ರಯದಲ್ಲಿ ಶ್ರೀ ರಾಮಚಂದ್ರ ಭಟ್, ಕುಕ್ಕುಜೆ ಕ್ಷೇತ್ರಾಧಿಕಾರಿಗಳ ನೇತೃತ್ವದಲ್ಲಿ ಉಚಿತ ಕೃಷಿ ಉಪಕರಣಗಳ ವಿತರಣಾ ಕಾರ್ಯಕ್ರಮ ಸೆ.25 ರಂದು ನೆರವೇರಿತು.

ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಉಡುಪಿ ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿದ 96 ಫಲಾನುಭವಿಗಳಿಗೆ ಡಬ್ಲ್ಯೂ ಸಿ ಎಸ್ ಇಂಡಿಯ ಬೆಂಗಳೂರು, ಇದರ ಆಶ್ರಯದಲ್ಲಿ ಅಡಿಕೆಗೆ ಔಷಧ ಸಿಂಪಡಣೆ ಯಂತ್ರ 8 ಜನರಿಗೆ, ಅಡಿಕೆ ಮರ ಹತ್ತುವ ಯಂತ್ರ 4 ಜನರಿಗೆ, ಅಲ್ಯುಮಿನಿಯಂ ಏಣಿ 10 ಜನರಿಗೆ, ಕೈಗಾಡಿ 5 ಜನರಿಗೆ, ಸೋಲಾರ್ ಟರ್ಪಲ್ 5 ಜನರಿಗೆ, 5,000 ಅಡಿಕೆ ಸಸಿ, 200 ತೆಂಗಿನ ಸಸಿ, 200 ಕೊಕ್ಕೋ, 20 ಜನ ಫಲಾನುಭವಿಗಳಿಗೆ ತಲಾ 50 ರಂತೆ ಮಲ್ಲಿಗೆ ಗಿಡ, 25 ಜನರಿಗೆ ಡ್ರೈವಿಂಗ್ ತರಬೇತಿ ಮತ್ತು ಲೈಸೆನ್ಸ್ ಪತ್ರ, ಕುತ್ಲೂರು ಶ್ರೀದೇವಿ ಕೃಪಾದಲ್ಲಿ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಸಂಸ್ಥೆಯ ಕ್ಷೇತ್ರಾಧಿಕಾರಿಯಾದ ರಾಮಚಂದ್ರ ಭಟ್ ಕುಕ್ಕುಜೆ, ಯೋಜನೆಗಳ ಬಗ್ಗೆ ತಿಳಿಸಿ ಸ್ವಾಗತಿಸಿದರು. ಉಪಕರಣಗಳನ್ನು ವಿತರಿಸಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ಡಬ್ಲ್ಯೂ ಸಿ ಎಸ್ ಸಂಸ್ಥೆಗೆ ಅಭಿನಂದಿಸಿದರು. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರವೀಂದ್ರ ಪೂಜಾರಿ ಕೃಷಿ ಉಪಕರಣಗಳನ್ನು ಸದುಪಯೋಗ ಮಾಡಿ ಕೃಷಿಯಲ್ಲಿ ಮುಂದುವರಿಯಬೇಕೆಂದು ತಿಳಿಸಿದರು.

ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಭಂಡಾರಿ ಸಂಸ್ಥೆಯ ಕಾರ್ಯಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ವೇಣೂರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ನಿರಂಜನ್, ಪ್ರಗತಿಪರ ಕೃಷಿಕರಾದ ಮುನಿರಾಜ್ ಜೈನ್, ಅಭಿಜಿತ್, ಸಂಸ್ಥೆಯ ರವಿ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಡಬ್ಲ್ಯೂ.ಸಿ.ಎಸ್ ಸಂಸ್ಥೆಯನ್ನು ಫಲನುಭವಿಗಳಾದ ದೇವಪ್ಪ ಮಲೆಕುಡಿಯ ನೂರಾಳ್ ಬೆಟ್ಟು, ಶ್ರೀಮತಿ ಅಮಿತ ನಾಯ್ಕ ಕುತ್ಲೂರು ಅಭಿನಂದಿಸಿದರು. ಸಂಸ್ಥೆಯ ಕ್ಷೇತ್ರಾಧಿಕಾರಿಯಾದ ಧರ್ಣಪ್ಪ ಧನ್ಯವಾದವಿತ್ತರು.

Related posts

ಕರಾಟೆ ಚಾಂಪಿಯನ್ ಶಿಪ್: ಶಕ್ತಿನಗರದ ಸೆನ್ಸಾಯ್ ಸಿರಾಜ್ ಎಚ್ ರವರಿಗೆ ಬ್ಲಾಕ್ ಬೆಲ್ಟ್ ಸೀನಿಯರ್ ವಿಭಾಗದಲ್ಲಿ ಗ್ರ್ಯಾಂಡ್ ಚಾಂಪಿಯನ್ ಟ್ರೋಫಿ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವಿಶ್ವಹಿಂದೂ ಪರಿಷತ್ ಭಜರಂಗದಳ ವೇಣೂರು ಪ್ರಖಂಡದಿಂದ ವೇಣೂರು ಪೋಲೀಸ್ ಠಾಣೆಗೆ ದೂರು

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನೀಲೇಶ್ವರದ ತಂತ್ರಿವರ್ಯರಾದ ಉಚ್ಚಿಲ ಪದ್ಮನಾಭ ತಂತ್ರಿಗಳ ಭೇಟಿ

Suddi Udaya

ಕಳೆಂಜ: ಶಿಬರಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಪರಪ್ಪು ಸಮೀಪ ಗುಡ್ಡ ಕುಸಿತ

Suddi Udaya

ಕಣಿಯೂರು: ವಿದ್ಯುತ್ ತಂತಿ ಸ್ಪರ್ಶಿಸಿ ನವಿಲು ಸಾವು

Suddi Udaya
error: Content is protected !!