ಮೊಗ್ರು: ಸರಕಾರಿ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಮೊಗ್ರು: ಸರಕಾರಿ ಪ್ರೌಢ ಶಾಲೆ ಬುಳೇರಿಮೊಗ್ರು ಇಲ್ಲಿ ಪೋಷಕರ ಸಭೆಯನ್ನು ಸೆ.25 ರಂದು ನಡೆಸಲಾಯಿತು.

ಸಭೆಯಲ್ಲಿ ಶಾಲೆಗೆ ಧ್ವನಿವರ್ಧಕದ ವ್ಯವಸ್ಥೆ ಮಾಡಿಕೊಟ್ಟ ಕೊಡುಗೈ ದಾನಿಗಳಾದ ಕಡಮಜಲು ಸುಭಾಸ್ ರೈ, ಅಧ್ಯಕ್ಷರು, ಸ್ವಾತಂತ್ರ ಹೋರಾಟಗಾರ ದೇಶಭಕ್ತ ಎಸ್ ಎನ್ ಕಿಲ್ಲೆ ಪ್ರತಿಷ್ಠಾನ ಇವರು ಹಾಗೂ ನಮ್ಮ ಶಾಲೆಯ ಹಿಂದಿ ಭಾಷಾ ಶಿಕ್ಷಕಿಯಾದ ಶ್ರೀಮತಿ ಜಯಂತಿ. ಪಿ ಇವರ ಪುತ್ರ ಹರ್ಷ ಕೆ.ಎಲ್ ಇವರು ಪ್ರಸ್ತುತ ಸಾಲಿನಲ್ಲಿ ಎಮ್ ಬಿಬಿಎಸ್ ಓದಲು ಸರ್ಕಾರಿ ಕೋಟಾದಲ್ಲಿ ಪ್ರವೇಶಾತಿಯನ್ನು ಪಡೆದಿರುವುದಕ್ಕಾಗಿ ಶಾಲಾ ವತಿಯಿಂದ ಗೌರವಿಸಲಾಯಿತು.

ಬಳಿಕ ಕಡಮಜಲು ಸುಭಾಸ್ ರೈ ಇವರು ಪೋಷಕ-ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳ ಬಗ್ಗೆ ಮಾಹಿತಿ ನೀಡಿದರು. ಹರ್ಷ ಇವರು ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಹೇಗೆ ಗುರಿ ಸಾಧಿಸಬಹುದೆಂಬುದರ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

Leave a Comment

error: Content is protected !!