ಉಜಿರೆ ಆದಿನಾಗ ಬ್ರಹ್ಮ ಮೊಗೇರ್ಕಳ ದೇವಸ್ಥಾನದಿಂದ ಕಾರ್ಯಕರ್ತರಿಗೆ ಅಭಿನಂದನೆ

Suddi Udaya

ಉಜಿರೆ: ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನ ಶ್ರೀ ಕ್ಷೇತ್ರ ಎರ್ನೊಡಿ ಉಜಿರೆ, ಇಲ್ಲಿಯ ಕಾರ್ಯಕರ್ತ ಬಂಧುಗಳಿಗೆ ಕ್ಷೇತ್ರದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಅ.1ರಂದು ನಡೆಸಲಾಯಿತು.


ಅಧ್ಯಕ್ಷತೆಯನ್ನು ಕ್ಷೇತ್ರದ ಟ್ರಸ್ಟಿಗಳಾದ ಜಯಂತ್ ಶೆಟ್ಟಿ ಕುಂಟಿನಿ, ಇವರು ನಡೆಸಿಕೊಟ್ಟರು.
ಎಂ. ಬಿ.ಕರಿಯ, ಟ್ರಸ್ಟಿ ಇವರು ಸ್ವಾಗತ ಕೋರಿದರು.
ರವಿಚಂದ್ರ ಚಕ್ಕಿತ್ತಾಯ, ಟ್ರಸ್ಟಿ, ಉದ್ಯಮಿಗಳು ರಾಘವೇಂದ್ರ ಮೆಟಲ್ಸ್ ಉಜಿರೆ. ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉಧ್ಘಾಟಿಸಿದರು.
ಆಡಳಿತ ಮೊಕ್ತೇಸರರಾದ ಯು. ಬಾಬು ಮೊಗೇರ, ಇವರು ಪ್ರಾಸ್ತಾವಿಕವಾಗಿ ನುಡಿದರು. ಅತಿಥಿಗಳಾಗಿ ನೋಣಯ್ಯ ಪುಂಜಾಲಕಟ್ಟೆ, ಸಂಜೀವ ಶೆಟ್ಟಿ ಕುಂಟಿನಿ, ಅಮ್ಮು ಮೊಗೇರ ಎರ್ನೋಡಿ, ಟಿ ಬಾಬು ತುಂಬೆದೊಟ್ಟು, ಗೋವಿಂದ ಬಿ.ಕೆ ಮುಂಡಾಜೆ, ಗೋಪಾಲ್ ಮಾಸ್ಟರ್, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕ್ಷೇತ್ರ ದ ನೂತನ ಧ್ವನಿಸುರುಳಿ ರಚಿಸಿದ ಆನಂದ. ಎಸ್. ಡಿ. ಗುರಿಪಳ್ಳ ( ಗಾಯನ), ಪ್ರಶಾಂತ್ ಧರ್ಮಸ್ಥಳ ( ಛಾಯಾಗ್ರಾಹಕ/ಸಂಕಲನ) ಸಂಕ್ರಾಂತಿ ಅಡುಗೆಯಲ್ಲಿ ಭಾಗಿಯಾದ ಉದಯ ಶೆಟ್ಟಿ, ಗಿರೀಶ್ ಗೌಡ, ದಿನೇಶ್ ಗೌಡ, ಪದ್ಮ ನಾಯ್ಕ, ಶಶಿಧರ ಕಲ್ಮಂಜ, ಶಿವಪ್ರಸಾದ್ ಅಳಕೆ,ರಮೇಶ್ ಪಜಿರಡ್ಕ, ಸುಜನ್ ಪಜಿರಡ್ಕ, ಪ್ರಶಾಂತ್ ಧರ್ಮಸ್ಥಳ, ಸುಧೀರ್, ರಾಜೇಶ್ ಜೋಗಿ, ಜನಾರ್ಧನ ಕಲ್ಮಂಜ, ರಮೇಶ್ ಉಜಿರೆ, ನಿಕೇಶ್, ರಿತೇಶ್, ರಂಜನ್, ನಿತೇಶ್, ಕೇತನ್, ರಾಜಾರಾಮ್ ನೇಕಾರ, ಕ್ಷೇತ್ರದ ನೇಮೋತ್ಸವದ ವಂತಿಗೆ ಹಾಗೂ ಶ್ರಮದಾನಕ್ಕೆ ಸಹಕರಿಸಿದ ಪ್ರದೀಪ್ ಎರ್ನೋಡಿ, ದಿಲೀಪ್ ಎರ್ನೋಡಿ, ದೀಕ್ಷಿತ್, ಶಮಿತ್, ಆನಂದ ಎರ್ನೋಡಿ, ಮೋಹನ ಕನ್ಯಾಡಿ-||
ಸಂತೋಷ್ ಕುಂಟಿನಿ, ಸಚಿನ್ ಕುಂಟಿನಿ, ಶೇಖರ್, ಶ್ರೀಧರ್, ರಂಜಿತ್, ಸುಶಾಂತ್, ಸಂಜಯ್, ಅಜಯ್, ಮನೋಜ್, ಮನೋಹರ್, ಕೃಷ್ಣಪ್ಪ ಪಾರ, ಗಣೇಶ್ ಪಾರ, ಭರತ್, ದಿನೇಶ್, ಉಮೇಶ್, ಮೋಹನ್, ಪ್ರಜ್ವಲ್, ಪ್ರದೀಪ್, ಸತೀಶ್, ರವೀಶ್, ಸುಶಾಂತ್, ಸಂದೇಶ, ಸುಮಂತ್, ರೋಹಿತ್, ಜೀವಿತ್, ಗೌತಮ್, ಕೀರ್ತನ್ ಇವರನ್ನು ಸನ್ಮಾನಿಸಲಾಯಿತು. ಎಸ್ .ಡಿ ಅನಂದ ಗುರಿಪಳ್ಳ ಪ್ರಾರ್ಥನೆ ಹಾಡಿದರು.

Leave a Comment

error: Content is protected !!