ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಆದಿನಾಗ ಬ್ರಹ್ಮ ಮೊಗೇರ್ಕಳ ದೇವಸ್ಥಾನದಿಂದ ಕಾರ್ಯಕರ್ತರಿಗೆ ಅಭಿನಂದನೆ

ಉಜಿರೆ: ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನ ಶ್ರೀ ಕ್ಷೇತ್ರ ಎರ್ನೊಡಿ ಉಜಿರೆ, ಇಲ್ಲಿಯ ಕಾರ್ಯಕರ್ತ ಬಂಧುಗಳಿಗೆ ಕ್ಷೇತ್ರದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಅ.1ರಂದು ನಡೆಸಲಾಯಿತು.


ಅಧ್ಯಕ್ಷತೆಯನ್ನು ಕ್ಷೇತ್ರದ ಟ್ರಸ್ಟಿಗಳಾದ ಜಯಂತ್ ಶೆಟ್ಟಿ ಕುಂಟಿನಿ, ಇವರು ನಡೆಸಿಕೊಟ್ಟರು.
ಎಂ. ಬಿ.ಕರಿಯ, ಟ್ರಸ್ಟಿ ಇವರು ಸ್ವಾಗತ ಕೋರಿದರು.
ರವಿಚಂದ್ರ ಚಕ್ಕಿತ್ತಾಯ, ಟ್ರಸ್ಟಿ, ಉದ್ಯಮಿಗಳು ರಾಘವೇಂದ್ರ ಮೆಟಲ್ಸ್ ಉಜಿರೆ. ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉಧ್ಘಾಟಿಸಿದರು.
ಆಡಳಿತ ಮೊಕ್ತೇಸರರಾದ ಯು. ಬಾಬು ಮೊಗೇರ, ಇವರು ಪ್ರಾಸ್ತಾವಿಕವಾಗಿ ನುಡಿದರು. ಅತಿಥಿಗಳಾಗಿ ನೋಣಯ್ಯ ಪುಂಜಾಲಕಟ್ಟೆ, ಸಂಜೀವ ಶೆಟ್ಟಿ ಕುಂಟಿನಿ, ಅಮ್ಮು ಮೊಗೇರ ಎರ್ನೋಡಿ, ಟಿ ಬಾಬು ತುಂಬೆದೊಟ್ಟು, ಗೋವಿಂದ ಬಿ.ಕೆ ಮುಂಡಾಜೆ, ಗೋಪಾಲ್ ಮಾಸ್ಟರ್, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕ್ಷೇತ್ರ ದ ನೂತನ ಧ್ವನಿಸುರುಳಿ ರಚಿಸಿದ ಆನಂದ. ಎಸ್. ಡಿ. ಗುರಿಪಳ್ಳ ( ಗಾಯನ), ಪ್ರಶಾಂತ್ ಧರ್ಮಸ್ಥಳ ( ಛಾಯಾಗ್ರಾಹಕ/ಸಂಕಲನ) ಸಂಕ್ರಾಂತಿ ಅಡುಗೆಯಲ್ಲಿ ಭಾಗಿಯಾದ ಉದಯ ಶೆಟ್ಟಿ, ಗಿರೀಶ್ ಗೌಡ, ದಿನೇಶ್ ಗೌಡ, ಪದ್ಮ ನಾಯ್ಕ, ಶಶಿಧರ ಕಲ್ಮಂಜ, ಶಿವಪ್ರಸಾದ್ ಅಳಕೆ,ರಮೇಶ್ ಪಜಿರಡ್ಕ, ಸುಜನ್ ಪಜಿರಡ್ಕ, ಪ್ರಶಾಂತ್ ಧರ್ಮಸ್ಥಳ, ಸುಧೀರ್, ರಾಜೇಶ್ ಜೋಗಿ, ಜನಾರ್ಧನ ಕಲ್ಮಂಜ, ರಮೇಶ್ ಉಜಿರೆ, ನಿಕೇಶ್, ರಿತೇಶ್, ರಂಜನ್, ನಿತೇಶ್, ಕೇತನ್, ರಾಜಾರಾಮ್ ನೇಕಾರ, ಕ್ಷೇತ್ರದ ನೇಮೋತ್ಸವದ ವಂತಿಗೆ ಹಾಗೂ ಶ್ರಮದಾನಕ್ಕೆ ಸಹಕರಿಸಿದ ಪ್ರದೀಪ್ ಎರ್ನೋಡಿ, ದಿಲೀಪ್ ಎರ್ನೋಡಿ, ದೀಕ್ಷಿತ್, ಶಮಿತ್, ಆನಂದ ಎರ್ನೋಡಿ, ಮೋಹನ ಕನ್ಯಾಡಿ-||
ಸಂತೋಷ್ ಕುಂಟಿನಿ, ಸಚಿನ್ ಕುಂಟಿನಿ, ಶೇಖರ್, ಶ್ರೀಧರ್, ರಂಜಿತ್, ಸುಶಾಂತ್, ಸಂಜಯ್, ಅಜಯ್, ಮನೋಜ್, ಮನೋಹರ್, ಕೃಷ್ಣಪ್ಪ ಪಾರ, ಗಣೇಶ್ ಪಾರ, ಭರತ್, ದಿನೇಶ್, ಉಮೇಶ್, ಮೋಹನ್, ಪ್ರಜ್ವಲ್, ಪ್ರದೀಪ್, ಸತೀಶ್, ರವೀಶ್, ಸುಶಾಂತ್, ಸಂದೇಶ, ಸುಮಂತ್, ರೋಹಿತ್, ಜೀವಿತ್, ಗೌತಮ್, ಕೀರ್ತನ್ ಇವರನ್ನು ಸನ್ಮಾನಿಸಲಾಯಿತು. ಎಸ್ .ಡಿ ಅನಂದ ಗುರಿಪಳ್ಳ ಪ್ರಾರ್ಥನೆ ಹಾಡಿದರು.

Related posts

ವೇಣೂರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರವೀಂದ್ರರಿಗೆ ಎ.ಎಸ್.ಐ. ಯಾಗಿ ಬಂಟ್ವಾಳ ನಗರ ಠಾಣೆಗೆ ಭಡ್ತಿ

Suddi Udaya

ಸಮಾಜ ಸೇವಕ ಕೇಶವ ಫಡಕೆಯವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಡಿ.ಕೆ. ಆರ್.ಡಿ.ಎಸ್ ನಿಂದ ಪೌಷ್ಟಿಕ ಆಹಾರ ಮಾಹಿತಿ, ಪ್ರಾತ್ಯಕ್ಷಿಕೆ ಹಾಗೂ ಗುರುವಂದನಾ ಕಾರ್ಯಕ್ರಮ

Suddi Udaya

ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ: ಬೆಳ್ತಂಗಡಿಯಲ್ಲಿ ಸರಣಿ ಅಪಘಾತ

Suddi Udaya

ನೆಲ್ಲಿಕಟ್ಟೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ನೂತನ ಅಧ್ಯಕ್ಷರಾಗಿ ಜನಾರ್ಧನ ಗೌಡ ಕುಳಾಯಿ ಕಾರ್ಯದರ್ಶಿಯಾಗಿ ಸುಂದರ್ ನಾಯ್ಕ್ ಕುಳಾಯಿ ಆಯ್ಕೆ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಾ. ಕೆ ಜಯಕೀರ್ತಿ ಜೈನ್ , ಉಪಾಧ್ಯಕ್ಷರಾಗಿ ಚಿದಾನಂದ ಎಸ್. ಹೂಗಾರ್ ಅವಿರೋಧ ಆಯ್ಕೆ

Suddi Udaya
error: Content is protected !!