ಪಡ್ಡಂದಡ್ಕ ಮಿಲದುನ್ನೆಬಿ ಪ್ರಯುಕ್ತ ಮದರಸ ಮಕ್ಕಳ ಪ್ರತಿಭಾ ಪ್ರದರ್ಶನ

Suddi Udaya

Updated on:

ವೇಣೂರು: ನೂರುಲ್ ಹುದಾ ಜುಮ್ಮಾ ಮಸೀದಿ ಪಡ್ಡಂದಡ್ಕ ಮಸೀದಿಯ ಸಭಾಂಗಣದಲ್ಲಿ ಮಿಲದುನ್ನೆಬಿ ಪ್ರಯುಕ್ತ ಮದರಸ ಮಕ್ಕಳ ಪ್ರತಿಭಾ ಪ್ರದರ್ಶನ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಅಧ್ಯಕ್ಷತೆಯಲ್ಲಿ ಜರಗಿತು.

ಮಸೀದಿ ಖತೀಬರಾದ ಜನಾಬ್ ಅಶ್ರಫ್ ಫೈಝಿ ಅರ್ಕಾನ ದುವಾ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಎಚ್ ಮಹಮ್ಮದ್ ವೇಣೂರು, ಮಸೀದಿ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಾಫಿ ಕಿರೋಡಿ ,ಪಿಪಿ ಅಹ್ಮದ್ ಸಖಾಫಿ , ಮಾಜಿ ಅಧ್ಯಕ್ಷರುಗಳಾದ ಪಿಎ ಇಬ್ರಾಹಿಂ ಪೆರಿಂಜೆ ,ಪಿಎಸ್ ಜಲೀಲ್ , ಖಾಲಿದ್ ಪುಲಾಬೆ ,ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ ,ಶುಭ ಹಾರೈಸಿದರು

ಜನಾಬ್ ದಾವೂದ್ ದಾರಿಮಿ,ಇಬ್ರಾಹಿಂ ದಾರಿಮಿ ,ಅಲ್ತಾಫ್ ಉಸ್ತಾದ್ ,ನಿಝಮ್ ಮರ್ಜ್ವೂಕಿ ಅಶ್ರಫ್ ಸಹಿದಿ ಉಪಸ್ಥಿತರಿದ್ದರು

ಮಸೀದಿ ಕಾರ್ಯದರ್ಶಿ ರಫೀಕ್ ಸ್ವಾಗತಿಸಿ ಕೋಶಾಧಿಕಾರಿ ಪಿಜೆ ಮಹಮೂದ್ ವಂದಿಸಿದರು

ಸಮಿತಿಯ ಪ್ರಮುಖರಾದ ನಝೀರ್ ಪೆರಿಂಜೆ ,ಇರ್ಪಾನ್ ಯು ಕೆ ,ಅಶ್ರಫ್ ಗಾಂಧಿನಗರ ,ಇದ್ರೀಸ್ ಪುಲಾಬೆ, ಅಶ್ರಫ್ ಕಿರೋಡಿ ,ಅಬ್ದು ಸಲಾಂ, ಸಹಕರಿಸಿದ್ದರು

ಬಳಿಕ ನಡೆದ ಇಶ್ಕೆ ಮದೀನಾ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಮೊಹಮ್ಮದ್ ಹಾಜಿ ಯು.ಕೆ , ಶರ್ಪುದ್ದೀನ್ ತಂಗಳ್ , ಕಿರೋಡಿ ಮಯ್ಯದ್ದಿ , ಸಾದಿಕ್ ಪೆರಿಂಜೆ,ಅಶ್ರಫ್ ಶಾಂತಿನಗರ ಮತ್ತು ತೀರ್ಪುಗಾರರಾದ ಗಪೂರ್ ಹನಫಿ , ಸಿನಾನ್ ಮೌಲವಿ ಉಪಸ್ಥಿತರಿದ್ದರು

Leave a Comment

error: Content is protected !!