ಮಡಂತ್ಯಾರು ಶ್ರೀ ಮಾರಿಕಾಂಬಾದೇವಿ ದೇವಸ್ಥಾನದ ಜೀರ್ಣೋದ್ವಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧನಸಹಾಯ

Suddi Udaya

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಜನಾ ವ್ಯಾಪ್ತಿಯಲ್ಲಿನ ಮಡಂತ್ಯಾರು ವಲಯದ ಮಾರಿಕಾಂಬಾ ನಗರ, ಪಾರೆಂಕಿ ಗ್ರಾಮದ ಶ್ರೀ ಮಾರಿಕಾಂಬಾದೇವಿ ದೇವಸ್ಥಾನದ ಜೀರ್ಣೋದ್ವಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದಿಂದ ಮಂಜೂರಾದ ಒಂದು ಲಕ್ಷ ಅನುದಾನದ ಡಿ .ಡಿ.ಯನ್ನು ಗುರುವಾಯನಕೆರೆ ಯೋಜನಾ ಕಛೇರಿಯ ಯೋಜನಾಧಿಕಾರಿ ದಯಾನಂದ ಪೂಜಾರಿ ಮತ್ತು ಬೆಳ್ತಂಗಡಿ ಯೋಜನಾ ಕಛೇರಿಯ ತಾಲೂಕಿನ ಯೋಜನಾಧಿಕಾರಿ ಸುರೆಂದ್ರ ಇವರು ದೇವಸ್ಥಾನ ಸಮಿತಿಯವರಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ರಾವ್ ಡಾ, ಕೆ.ಎಸ್ ಬಲ್ಲಾಳು ಕಾಂತಪ್ಪಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ, ಪಾರೆಂಕಿ ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಹೆಗ್ಡೆ, ಯೋಗೀಶ್ ಹೆಗ್ಡೆ ವಲಯ ಮೇಲ್ವಿಚಾರಕ ವಸಂತಕುಮಾರ್, ಪಾರೆಂಕಿ ಗ್ರಾಮದ ಸೇವಾಪ್ರತಿನಿಧಿಗಳು ಶ್ರೀಮತಿ ಲೀಲಾವತಿ, ಶ್ರೀಮತಿ ಹರಿಣಾಕ್ಷಿ, ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!