ಮುಂಡೂರು: ಕರುವಿನ ಮೇಲೆ ಚಿರತೆ ದಾಳಿ: ಆತಂಕದಲ್ಲಿ ಗ್ರಾಮಸ್ಥರು

Suddi Udaya

ಮುಂಡೂರು : ಅ 2 ರಂದು ತಡರಾತ್ರಿ ಸುಮಾರು 2ಗಂಟೆ ಹೊತ್ತಿಗೆ ಮುಂಡೂರು ಗ್ರಾಮದ ಕೇರಿಯಾರ್ ಗುರುವಪ್ಪ ಸಾಲಿಯಾನ್ ರವರ ಮನೆಯ ಕರುವೊಂದನ್ನು ಚಿರತೆ ದಾಳಿ ನಡೆಸಿ ತಿಂದು ಹಾಕಿ ಹೋಗಿದೆ.

ಮರುದಿನ ಅಳದಂಗಡಿ ವಲಯದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದು ಪರಿಶೀಲಿಸಿ ಚಿರತೆಯನ್ನು ಹಿಡಿಯುವ ಭರವಸೆ ನೀಡಿದರು. ಇದುವರೆಗೂ ಯಾವುದೇ ಕಾರ್ಯಾಚರಣೆ ನಡೆದಿದಿಲ್ಲ, ಸ್ಥಳೀಯರು ಕೋಟಿಕಟ್ಟೆಯಿಂದ ಕಾಡಬಾಗಿಲು ರಸ್ತೆ ಕಾಡಿನ ಮದ್ಯೆ ರಸ್ತೆಯಲ್ಲಿ ಸಂಚರಿಸುವ ಜನರಿಗೆ ವಾಹನ ಸವಾರಿಗೆ ಅದರಲ್ಲೂ ಬೆಳಿಗ್ಗೆ ಸಂಜೆ ಹೊತ್ತಿಗೆ ಹಾಲು ಕೊಂಡೋಗುವ ಹಾಗೂ ಸ್ಥಳೀಯ ಪರಿಸರದ ಜನರು ಭಯ ಭೀತರಾಗಿದ್ದಾರೆ ಎಂದರು ಸ್ಥಳೀಯರು ತಿಳಿಸಿದ್ದಾರೆ.

Leave a Comment

error: Content is protected !!