ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ ಶಿಪ್: ಉಜಿರೆ ಶ್ರೀ ಧ.ಮಂ.ಆಂ.ಮಾ. ಶಾಲೆಯ ವಿದ್ಯಾರ್ಥಿ ದೀಕ್ಷಿತಾ. ಕೆ ರವರಿಗೆ ಬೆಳ್ಳಿ ಪದಕ

Suddi Udaya

ಬೆಳ್ತಂಗಡಿ: ಅ.1 ರಂದು ಹುಬ್ಬಳ್ಳಿಯಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನಡೆಸಿದ 14 ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಬೆಳ್ತಂಗಡಿಯ ಯಮಾಟೋ ಶೊಟೊಖಾನ್ ಕರಾಟೆ ತರಗತಿಯ ವಿದ್ಯಾರ್ಥಿ ದೀಕ್ಷಿತಾ. ಕೆ ಇವರು -30 ಕೆ.ಜಿ ವಿಭಾಗದ ಕುಮಿತೆಯಲ್ಲಿ ಬೆಳ್ಳಿ ಪದಕ ವನ್ನು ಪಡೆದು ಡೆಹ್ರಾಡೂನ್ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಕ್ಕೆ ಆಯ್ಕೆಯಾಗಿರುತ್ತಾರೆ.

ಇವರು ವೈಎಸ್‌ಕೆ ಬೆಳ್ತಂಗಡಿಯ ಕರಾಟೆ ಗುರುಗಳಾದ ಅಶೋಕ್ ಆಚಾರ್ಯ ಮತ್ತು ಕೋಚ್ ಮಿಥುನ್ ರವರಿಂದ ತರಬೇತಿ ಪಡೆಯುತ್ತಿದ್ದು ಇವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್‌ಟೇಬಲ್ ಕನಕರಾಜ್. ಆರ್ ಹಾಗೂ ಸುಮತಿ. ಕೆ ರವರ ಪುತ್ರಿಯಾಗಿದ್ದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿಬಿಎಸ್‌ಇ ಆಂಗ್ಲ ಮಾದ್ಯಮ ಶಾಲೆಯ 5 ನೇ ತರಗತಿಯ ಬಿ ವಿಭಾಗದ ವಿದ್ಯಾರ್ಥಿಯಾಗಿರುತ್ತಾರೆ.

Leave a Comment

error: Content is protected !!