ಅ.27-28 : ಸ.ಉ.ಹಿ.ಪ್ರಾ. ಶಾಲೆ ಬಜಿರೆಯಲ್ಲಿ ನಡೆಯುವ ತಾಲೂಕು ಮಟ್ಟದ ಕ್ರೀಡಾಕೂಟದ ಸಂಘಟನಾ ಸಮಿತಿ ರಚನೆ

Suddi Udaya

ಬಜಿರೆ: ಅ.27 ಮತ್ತು ಅ.28 ರಂದು ಸ.ಉ.ಹಿ.ಪ್ರಾ. ಶಾಲೆ ಬಜಿರೆಯಲ್ಲಿ ನಡೆಯಲಿರುವ ಬೆಳ್ತಂಗಡಿ ತಾಲೂಕು ಮಟ್ಟದ ಕ್ರೀಡಾಕೂಟದ ಸಂಘಟನಾ ಸಮಿತಿಯನ್ನು ಇತ್ತೀಚೆಗೆ ರಚನೆ ಮಾಡಲಾಯಿತು.


ಗೌರವಾಧ್ಯಕ್ಷರಾಗಿ ಶಶಿಕುಮಾರ್ ಇಂದ್ರ, ಅಧ್ಯಕ್ಷರಾಗಿ ಲೋಕೇಶ್ ಪೂಜಾರಿ ಕೋರ್ಲೋಡಿ, ಉಪಾಧ್ಯಕ್ಷರಾಗಿ ಅರುಣ್ ಪ್ರಕಾಶ್ ಕ್ರಾಸ್ತಾ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯಶಿಕ್ಷಕಿ ಕಮಲಾಜಿ ಎಸ್. ಜೈನ್, ಜೊತೆಕಾರ್ಯದರ್ಶಿಯಾಗಿ ಶಾಲಾ ಶಿಕ್ಷಕಿ ನಾಗವೇಣಿ, ಕೋಶಾಧಿಕಾರಿಯಾಗಿ ಲ| ನವೀನ್ ಪೂಜಾರಿ ಪಚ್ಚೇರಿ ಆಯ್ಕೆಯಾದರು.


ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಲೋಕಯ್ಯ ಪೂಜಾರಿ, ಉಪಾಧ್ಯಕ್ಷರಾಗಿ ರಾಜು ಪೂಜಾರಿ, ಆಹಾರ ಸಮಿತಿ ಹಾಗೂ ಅತಿಥಿ ಸತ್ಕಾರ ಸಮಿತಿಯ ಅಧ್ಯಕ್ಷರಾಗಿ ಅರುಣ್ ಐಂದಲ್ಕೆ, ಉಪಾಧ್ಯಕ್ಷರಾಗಿ ಸಂತೋಷ್ ಬಲ್ಯಾಯ., ಅಲಂಕಾರ ವೇದಿಕೆ ಮತ್ತು ಆಸನ ವ್ಯವಸ್ಥೆ ಸಮಿತಿಯ ಅಧ್ಯಕ್ಷರಾಗಿ ಜಯಶ್ರೀ, ಉಪಾಧ್ಯಕ್ಷರಾಗಿ ಮಲ್ಲಿಕಾ ಕಾಶಿನಾಥ್
ಕ್ರೀಡಾಜ್ಯೋತಿ ಸಮಿತಿಯ ಅಧ್ಯಕ್ಷರಾಗಿ ಪ್ರಶಾಂತ್ ಹೆಗ್ಡೆ ಕುಂಟಲ್‌ಮಾರ್, ಉಪಾಧ್ಯಕ್ಷರಾಗಿ ವಸಂತ ಮಡಿವಾಳ,
ಆರೋಗ್ಯ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ರೇಖಾಚಂದ್ರ ಅಂಗನವಾಡಿ ಕಾರ್ಯಕರ್ತೆ, ಉಪಾಧ್ಯಕ್ಷರಾಗಿ ಆರೋಗ್ಯ ಸಹಾಯಕಿ ಸಹನಾ., ಆರ್ಥಿಕ ಸಮಿತಿಯ ಅಧ್ಯಕ್ಷರಾಗಿ ಶಿವಾನಂದ ಗೌಡ, ಉಪಾಧ್ಯಕ್ಷರಾಗಿ ಶರತ್ ರೈ.
ಆಮಂತ್ರಣ ಪತ್ರಿಕೆ ಮತ್ತು ಸ್ವಾಗತ ಸಮಿತಿ ಆರ್ಥಿಕ ಸಮಿತಿಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವಸದಸ್ಯರನ್ನು ಆಯ್ಕೆ ಮಾಡಲಾಯಿತು.


ನೀರು ನೈರ್ಮಲ್ಯ ಶುಚಿತ್ವ ಸಮಿತಿಯ ಅಧ್ಯಕ್ಷರಾಗಿ ಗ್ರಾ.ಪಂ. ಸದಸ್ಯ ಸುನೀಲ್, ಉಪಾಧ್ಯಕ್ಷರಾಗಿ ಕಾಶಿನಾಥ್ ಹೆಗ್ಡೆ.
ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಪದ್ಮನಾಭ ಕುಲಾಲ್, ಉಪಾಧ್ಯಕ್ಷರಾಗಿ ರಮೇಶ್ ಆಚಾರ್ಯ, ಕ್ರೀಡಾಂಗಣ ಸಮಿತಿಯ ಅಧ್ಯಕ್ಷರಾಗಿ ಡೀಕಯ್ಯ ಗೌಡ, ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ, ಸ್ವಯಂ ಸೇವಕರ ಸಮಿತಿಯ ಅಧ್ಯಕ್ಷರಾಗಿ ವಿಜಯ ಹೊಸಪಟ್ಣ, ಉಪಾಧ್ಯಕ್ಷರಾಗಿ ಅರುಣ್ ಪೂಜಾರಿ, ವಸತಿ ವ್ಯವಸ್ಥೆ ಸಮಿತಿಯ ಅಧ್ಯಕ್ಷರಾಗಿ ವಲಯದ ಸೇವಾಪ್ರತಿನಿಧಿ ರೂಪಚಂದನ್ ಉಪಾಧ್ಯಕ್ಷರಾಗಿ ಪ್ರಶಾಂತ್ ಭಟ್ ಇವರನ್ನು ಆಯ್ಕೆ ಮಾಡಲಾಯಿತು.

Leave a Comment

error: Content is protected !!