ಮುಂಡಾಜೆ: ತಾಲೂಕು ಮಟ್ಟದ ಕೇರಂ ಪಂದ್ಯಾಟ: ವಿಜೇತರಿಗೆ ಬಹುಮಾನ

Suddi Udaya

ಬೆಳ್ತಂಗಡಿ: ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಲಯನ್ಸ್ ಕ್ಲಬ್
ಇಂಟರ್ನ್ಯಾಷನಲ್ ಇದರ ಸಹಯೋಗದೊಂದಿಗೆ ಅ.8 ರಂದು ಮುಂಡಾಜೆಯಲ್ಲಿ‌ ನಡೆದ ತಾಲೂಕು‌ ಮಟ್ಟದ ಕೇರಂ ಪಂದ್ಯಾಟದ ವಿಜೇತ ಜೋಡಿಗಳಿಗೆ ಬಹುಮಾನ ವಿತರಿಸಲಾಯಿತು.


ಹೇಮಂತ ಶೆಟ್ಟಿ- ಕಾರ್ತಿಕ್ ಪ್ರಥಮ ಸ್ಥಾನವನ್ನು ಮತ್ತು ಆನಂದ- ಪ್ರಸಾದ್ ಶೆಟ್ಟಿ ದ್ವಿತೀಯ ಸ್ಥಾನ ಪಡೆದು ನಗದು ಬಹುಮಾನದೊಂದಿಗೆ ಚಾಲೆಂಜರ್ಸ್ ಟ್ರೋಫಿ 2023 ನ್ನು ತಮ್ಮದಾಗಿಸಿಕೊಂಡರು.
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ , ಸಂಚಾಲಕ ನಾಮದೇವ ರಾವ್, ಒಕ್ಕಲಿಗ ಗೌಡರ ಸಂಘದ ತಾ. ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಗಣ್ಯರಾದ ರಾಘವ ಶೆಟ್ಟಿ ನೆಯ್ಯಾಲು, ಕೃಷ್ಣಪ್ಪ, ಪರಮೇಶ್ವರ ಇವರು ಬಹುಮಾನ ವಿತರಿಸಿದರು.

Leave a Comment

error: Content is protected !!