ಬೆಳ್ತಂಗಡಿ: “ಸಮಾಜಮುಖಿ ಸೇವೆಯಲ್ಲಿ ವಿ. ಹರೀಶ್ ನೆರಿಯ ರವರಿಗೆ ವಿಶೇಷ ಸಾಧಕ” ಪ್ರಶಸ್ತಿಯ ಗರಿಮೆ

Suddi Udaya

ಬೆಳ್ತಂಗಡಿ: ರೋಟರಿ ಕ್ಲಬ್ ನಾಗರಬಾವಿ ಬೆಂಗಳೂರು R.I.D3191 ರವರು ವಿ. ಹರೀಶ್ ನೆರಿಯ ರವರ ಸಮಾಜಮುಖಿ ಸೇವೆಗಾಗಿ “EXCELLENC IN COMMUNITY SARVICE THROUGH SPECIAL PROJROCT ” ಪ್ರಶಸ್ತಿ ಯನ್ನು ರೋ. ದೀಪಕ್ ಶ್ರೀನಿವಾಸ್ ಜಿಲ್ಲಾ ಕಾರ್ಯದರ್ಶಿ RI3191, ರೋ. ಮಮತಾ ಬಾಲಾಜಿ ಅಸಿಸ್ಟೆಂಟ್ ಗವರ್ನರ್ RI3191, ರೋ. ಡಾ||ಪದ್ಮಾಕ್ಷಿ ಲೋಕೇಶ್ ಅಧ್ಯಕ್ಷರು RI 3191 ರವರು ಅ.13 ರಂದು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಹರೀಶ್ ನೆರಿಯ ರವರು ಓರ್ವ ರಂಗ ಕಲಾವಿದರಾಗಿದ್ದು ಸಮಾಜಮುಖಿಯಾಗಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆಯ ಕುರಿತು ಈ ಹಿಂದೆ ಸುದ್ದಿ ಉದಯ ವಿಶೇಷ ವರದಿಯ ಮೂಲಕ ಗೌರವ ನೀಡಿತ್ತು.

ಇವರು ನೆರಿಯ ನಿವಾಸಿಯಾಗಿದ್ದು ಸುದ್ದಿ ಉದಯ ವಾರಪತ್ರಿಕೆಯ ಪ್ರತಿನಿಧಿಯಾಗಿದ್ದಾರೆ.

Leave a Comment

error: Content is protected !!