ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಹೊಕ್ಕಾಡಿಗೋಳಿ ಇದರ ಆಶ್ರಯದಲ್ಲಿ ಅನಾರೋಗ್ಯ ಪೀಡಿತ ಬಡಕುಟುಂಬಗಳಿಗೆ ಸಹಾಯಧನ

Suddi Udaya

ಆರಂಬೋಡಿ ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಹೊಕ್ಕಾಡಿಗೋಳಿ ಇದರ ಆಶ್ರಯದಲ್ಲಿ ಜರಗಿದ ಅನಾರೋಗ್ಯ ಪೀಡಿತ ಬಡಕುಟುಂಬಗಳಿಗೆ ಸಹಾಯಧನ ನೀಡುವ ಬಗ್ಗೆ ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿದ ಮೊತ್ತವನ್ನು ಸಹಾಯಧನ ಹಾಗೂ ಕಿಟ್ ರೂಪದಲ್ಲಿ ವಿತರಿಸಲಾಯಿತು.

ರತ್ನಶೆಟ್ಟಿ ಪಡಿಲು, ಹೊನ್ನಪ್ಪ ನೀರಪಲ್ಕೆ, ಜಯ ನೀರಪಲ್ಕೆ, ಹೇಮಾವತಿ ಪೂಂಜ ಇವರಿಗೆ ಸಹಾಯಧನ ನೀಡಿದರೆ, ಅಶೋಕ್ ಕೈರೋಡಿ, ದೇಜಮ್ಮ ತಾರಿಕಟ್ಟೆ, ಜಯಂತಿ ಕುಂಟಾಲಪಲ್ಕೆ, ದೇಜಪ್ಪ ನೀರಪಲ್ಕೆ, ದಾವೂದ್ ಅಂಗರಕರಿಯ, ಇವರಿಗೆ ಕಿಟ್ ವಿತರಿಸಲಾಯಿತು. ಇನ್ನು 2ಅನಾರೋಗ್ಯದಲ್ಲಿರುವ ಮಕ್ಕಳು ಪ್ರಸ್ತುತ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುದರಿಂದ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅತೀ ಶೀಘ್ರದಲ್ಲಿ ಆಸ್ಪತ್ರೆಯಲ್ಲಿ ಸಹಾಯಧನ ವಿತರಿಸಲಾಗುವುದು.

ಈ ಸಂದರ್ಭದಲ್ಲಿ ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ತಂಡದ ಅಧ್ಯಕ್ಷರಾದ ನವೀನ್ ಕೂಡುರಸ್ತೆ, ಸುರೇಶ್ ನೀರಪಲ್ಕೆ, ಪ್ರಕಾಶ್ ಬಂಗೇರ ನೀರಪಲ್ಕೆ, ಸುರೇಶ್. ಎಚ್. ಹೊಕ್ಕಾಡಿಗೋಳಿ, ಅಭಿಷೇಕ್ ನೀರಪಲ್ಕೆ, ಶಿವರಾಮ ನೀರಪಲ್ಕೆ, ರಾಕೇಶ್ ನೀರಪಲ್ಕೆ, ಸುಕ್ಷಿತ್, ಪ್ರವೀಣ್, ಸುಶಾಂತ್,ಇನ್ನಿತರರು ಉಪಸ್ಥಿತರಿದ್ದರು.

Leave a Comment

error: Content is protected !!