ಕಡಿರುದ್ಯಾವರ: ಅಕ್ರಮ ಮರಳು ಸಂಗ್ರಹ ಪತ್ತೆ: ಪ್ರಕರಣ ದಾಖಲು

Suddi Udaya


ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದಲ್ಲಿ ನೇತ್ರಾವತಿ ನದಿಯಿಂದ ಡ್ರೆಜ್ಜಿಂಗ್ ಯಂತ್ರದ ಮೂಲಕ ಅಕ್ರಮವಾಗಿ ಮರಳು ತೆಗೆಯುತ್ತಿರುವ ಪ್ರಕರಣವನ್ನು ಬೆಳ್ತಂಗಡಿ ತಹಶೀಲ್ದಾರರು ಪತ್ತೆ ಹಚ್ಚಿದ್ದು, ಈ ಬಗ್ಗೆ ಭೂ ವಿಜ್ಞಾನ ಇಲಾಖೆಯವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಂಗಳೂರು ಭೂ ವಿಜ್ಞಾನ ಇಲಾಖೆಯ ಲೊಯಲ್ ಗ್ಲಾಡ್ ಸನ್ ಮಿರಾಂಡರವರು ಅ.15ರಂದು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಬೆಳ್ತಂಗಡಿ ತಹಶೀಲ್ದಾರರು ತಮ್ಮ ಸಿಬ್ಬಂದಿಗಳೊಂದಿಗೆ ಕಡಿರುದ್ಯಾವರ ಗ್ರಾಮದ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುವ ಸಮಯದಲ್ಲಿ ಕಡಿರುದ್ಯಾವರ ಗ್ರಾಮದಲ್ಲಿ ಹರಿಯುವ ನೇತ್ರಾವತಿ ನದಿಯಿಂದ ಡ್ರೆಜ್ಜಿಂಗ್ ಯಂತ್ರದ ಮಖಾಂತರ ಮರಳನ್ನು ತೆಗೆಯುತ್ತಿರುವುದು ಕಂಡು ಬಂದಿದ್ದು, ಇಂದಬೆಟ್ಟು ಗ್ರಾಮದ ಮನ್ನಡ್ಕ ಎಂಬಲ್ಲಿ ಅಂದಾಜು ರೂ. 1400 ಮೌಲ್ಯದ ಅರ್ಧ ಪಿಕಾಪ್‌ನಷ್ಟು ಮರಳನ್ನು ಸಂಗ್ರಹ ಮಾಡಿರುವುದು ಕಂಡು ಪತ್ತೆಯಾಗಿದೆ. ಅನಧಿಕೃತವಾಗಿ ಮರಳನ್ನು ತೆಗೆದು ಸಂಗ್ರಹ ಮಾಡಿದ ಶ್ರೀನಿವಾಸನ ಗೌಡ ಎಂಬವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆ ಅಕ್ರನಂ೯೯/೨೦೨೩ ಕಲಂ: ೩೭೯ IPಅ. ಯಂತೆ ಪ್ರಕರಣ ದಾಖಲಾಗಿದೆ.

Leave a Comment

error: Content is protected !!