ನಡ: ಮನೆಯ ಕೊಟ್ಟಿಗೆ ನುಗ್ಗಿದ ಬೃಹತ್ ಗಾತ್ರದ ಹೆಬ್ಬಾವು: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಮಂಜುನಾಥ್

Suddi Udaya

ಬೆಳ್ತಂಗಡಿ: ನಡ ಗ್ರಾಮದ ಅಡ್ಡಲಿಯಲ್ಲಿ, ನಡ ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಾದ ಗೋಪಾಲ ಗೌಡರ ಮನೆಯ ಕೊಟ್ಟಿಗೆ ನುಗ್ಗಿದ ಬೃಹತ್ ಗಾತ್ರ ದ ಹೆಬ್ಬಾವೊಂದನ್ನು ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಮಂಜುನಾಥ್ ರವರು ಹಿಡಿದು ಸುರಕ್ಷಿತ ವಾಗಿ ಕಾಡಿಗೆ ಬಿಟ್ಟರು.

ತಂಡದ ಸ್ವಯಂ ಸೇವಕ ಒಲ್ವಿನ್ ಡಿ ಸೋಜ, ಸ್ಥಳೀಯರಾದ ವಸಂತ ಹೆಗ್ಡೆ, ಪ್ರಕಾಶ್ ಬಾಳಿಕೆ ಕಾರ್ಯಚರಣೆಗೆ ಸಹಕರಿಸಿದರು.

Leave a Comment

error: Content is protected !!