ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವರ್ಗಾವಣೆ

Suddi Udaya

ಬೆಳ್ತಂಗಡಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೈಸೂರು ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ವಿವಿಧ ವೃಂದದ ನೌಕರರುಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ, ನಿಯೋಜಸಿ ಆದೇಶಿಸಿದೆ

ತಣ್ಣೀರುಪಂತ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ ವೈ ಎನ್ ರವರು ಮಳೂರು ಪಟ್ಟಣ ಗ್ರಾಮ ಪಂಚಾಯತ್ ಚೆನ್ನಪಟ್ಟಣಕ್ಕೆ, ಶಿರ್ಲಾಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉಜಿರೆ ಗ್ರಾ.ಪಂ. ಗೆ, ಕಣಿಯೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ ರವರು ಅಳದಂಗಡಿ ಗ್ರಾ.ಪಂ ಗೆ , ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚರವರು ಸುಳ್ಯ ಅಲೆಟ್ಟೆ ಗ್ರಾ.ಪಂಚಾಯತ್ ಗೆ, ಪಟ್ರಮೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಿತೇಶ್ ಎನ್ ಪುತ್ರನ್ ಮಡಮಕ್ಕಿ ಗ್ರಾ.ಪಂ ಹೆಬ್ರಿ ತಾಲೂಕಿಗೆ , ಬಾರ್ಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಶೀಲಾ ರವರು ಶಿರ್ಲಾಲು ಗ್ರಾ.ಪಂ ಗೆ, ವರ್ಗಾಹಿಸಲಾಗಿದೆ.

Leave a Comment

error: Content is protected !!