ಕಾರ್ಕಳದಲ್ಲಿ ಧರ್ಮ ಸಂರಕ್ಷಣಾ ಸಭೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ವಿರುದ್ಧ ಮಾನ ಹಾನಿ:ಬಂಗೇರ ಅಭಿಮಾನಿಗಳಿಂದ ವೇಣೂರು ಪೊಲೀಸರಿಗೆ ದೂರು

Suddi Udaya

ಬೆಳ್ತಂಗಡಿ: ಕಾರ್ಕಳದಲ್ಲಿ ನಡೆದ ಧರ್ಮ ಸಂರಕ್ಷಣಾ ಸಭೆಯಲ್ಲಿ,ಸ್ವಾಮೀಜಿಗಳು ಮತ್ತು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ವಿರುದ್ಧ ವಿನಾ ಕಾರಣ ಮಾನ ಹಾನಿ ಮತ್ತು ವೈಯಕ್ತಿಕ ತೇಜೋವದೆ ಮಾಡಿದ ಖಾಸಗಿ ಟಿ.ವಿ ಯ ವ್ಯವಸ್ಥಾಪಕ ರಾಕೇಶ್ ಶೆಟ್ಟಿಯವರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಕೆ.ವಸಂತ ಬಂಗೇರ ಅಭಿಮಾನಿಗಳಿಂದ ದೂರು ದಾಖಲಿಸಲಾಯಿತು.

ಈ ಸಂದರ್ಭದಲ್ಲಿ ಕಾಶಿಪಟ್ನ ಪಂಚಾಯತ್ ಅಧ್ಯಕ್ಷ ಹಾಗು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸತೀಶ್ ಬಂಗೇರ,ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ,ವೇಣೂರು ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟಿಯನ್ ,ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಂದನಾ ಭಂಡಾರಿ, ಬೆಳ್ತಂಗಡಿ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಶ್ರೀ ಶುಭಕರ್ ಪೂಜಾರಿ ಸಾವ್ಯ,ಸುಧರ್ಶನ್ ಶೆಟ್ಟಿ ಮತ್ತು ರಮೇಶ್ ಆರಂಬೋಡಿ , ಸದಸ್ಯರುಗಳು ಆರಂಬೋಡಿ ಗ್ರಾ ಪಂ .ಪ್ರಮುಖರಾದ , ಸತೀಶ್ ಹೆಗ್ಡೆ ,ಇಸ್ಮಾಯಿಲ್ ಕೆ ಪೆರಿಂಜೆ , ಶ್ರೀಪತಿ ಭಟ್ ಬಡಕೋಡಿ, ಖಾಲಿದ್ ಪುಲಬೆ ,ರಾಕೇಶ್ ಪೂಜಾರಿ ಮೂಡುಕೋಡಿ ,ಅರವಿಂದ ಶೆಟ್ಟಿ, ಬಾಲಕೃಷ್ಣ ಭಟ್ ಕಾಮೆಟ್ಟು ,ಐವಾನ್ ಮರೋಡಿ ,ನಾರಾಯಣ ಉಚ್ಚುರು,ವಿಠ್ಠಲ ಸಾವ್ಯ , ರಮೇಶ್ ಪೂಜಾರಿ ಪಡ್ಡಾಯೀಮಜಲು,ಅಬ್ದುಲ್ ರಹಿಮಾನ್ ಪಡ್ಡಂದಡ್ಕ , ಸೂರ್ಯನಾರಾಯಣ ಡಿಕೆ ,ಶಿವಪ್ರಕಾಶ್,ಸತೀಶ್ ಕಜಪಟ್ಟ ,ಪ್ರಶಾಂತ್ *ಬಡಕೋಡಿ ,ಶುಭಾನಂದ ಬಡಕೋಡಿ ,ಸತೀಶ್ ಸಾವ್ಯ ,ಸದಾಶಿವ ಕೊಕ್ರಾಡಿ ,ಸುಂದರ್ ಪೂಜಾರಿ ಮೂಡುಕೋಡಿ ,ಅಶೋಕ ಅಂಡಿಂಜೆ ,ಸಚಿನ್ ಗರ್ಡಾಡಿ ,ಚಂದ್ರ ಕಾಶಿಪಟ್ನ, ಶ್ರೀಕಾಂತ್ ಕುರ್ಲೊಟ್ಟು ,ನವೀನ್ ಪೂಜಾರಿ ಕೈದೋಟ್ಟು ಪೆರಿಂಜೆ. ರವಿ ಪೂಜಾರಿ ಮತ್ತು ಸುಂದರ ಪೂಜಾರಿ ಮೂಡುಕೋಡಿ ಮತ್ತು ಗಣ್ಯರು ಉಪಸ್ಥಿತರಿದ್ದರು.*

Leave a Comment

error: Content is protected !!