ಕೊಲ್ಲಿ : ಬ್ರಹ್ಮಕಲಶ ಸಮಿತಿಯ ಕಚೇರಿ ಉದ್ಘಾಟನೆ

Suddi Udaya

ಮಿತ್ತಬಾಗಿಲು : ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಕಚೇರಿಯ ಉದ್ಘಾಟನೆಯು ದೇವಸ್ಥಾನದ ರಥ ಬೀದಿಯಲ್ಲಿರುವ ಶೇಖರ್ ಪೂಜಾರಿಯವರ ಕಟ್ಟಡದಲ್ಲಿ ಅ.24 ರಂದು ಉದ್ಘಾಟನೆಗೊಂಡಿತು.

ಕಚೇರಿಯ ಉದ್ಘಾಟನೆಯನ್ನು ಉದ್ಯಮಿ ರಂಜನ್ ಜಿ. ಗೌಡ ಬೆಳ್ತಂಗಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಪ್ರ. ಕಾರ್ಯದರ್ಶಿ ದಾಸಪ್ಪ ಗೌಡ ಕಾಂಜಾನು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಕಕ್ಕೆನೇಜಿ, ಗೌರವ ಸಲಹೆಗಾರ ಡಾ. ವಾಣಿ ಸುಗುಣ ಕುಮಾರ್, ಸಹ ಕೋಶಾಧಿಕಾರಿ ಪರಮೇಶ್ವರ್ ರಾವ್, ಸಂಘಟನಾ ಕಾರ್ಯದರ್ಶಿ ವಿನಯಚಂದ್ರ ಸೇನೆರೆಬೆಟ್ಟು, ಶಾಲಿನಿ ಗೋಪಾಲ್ ಪೂಜಾರಿ, ಸಲಹೆಗಾರರಾದ ಕೃಷ್ಣಪ್ಪ ಪೂಜಾರಿ ಕಿಲ್ಲೂರು , ಪೂವಪ್ಪ ಗೌಡ ಕೊಂಡಮಲೆ, ಜೊತೆ ಕಾರ್ಯದರ್ಶಿ ಜ್ಯೋತಿಲಕ್ಷ್ಮಿ ಕಿಲ್ಲೂರು, ಶೇಖರ ಪೂಜಾರಿ ಕಂಬಳದಡ್ಡ, ಬಾಲಕೃಷ್ಣ ಪೂಜಾರಿ, ಜೀರ್ಣೋದ್ದಾರ, ಬ್ರಹ್ಮ ಕಲಶ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!