25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿಯಲ್ಲಿ ನೂತನವಾಗಿ ಪ್ರಾರಂಭಿಸಿದ ಡ್ರೀಮ್ ಡೀಲ್ ಗ್ರೂಪ್ಸ್ ಉದ್ಘಾಟನೆ

ಬೆಳ್ತಂಗಡಿ: ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಡ್ರೀಮ್ ಡೀಲ್ ಗ್ರೂಪ್ ನ ಬೆಳ್ತಂಗಡಿ ಬ್ರಾಂಚ್ ನ ಉದ್ಘಾಟನೆಯು ನಗರ ಪಂಚಾಯತ್ ಬಿಲ್ಡಿಂಗ್ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ನಡೆಯಿತು.

ನೂತನ ಡಿಡಿ ಗ್ರೂಪ್ ನ್ನು ಬೆಳ್ತಂಗಡಿ ಚರ್ಚ್ ನ ಧರ್ಮಗುರುಗಳಾದ ರೇ.ಫಾ| ಕ್ಲಿಪರ್ಡ್ ಸೈಮನ್ ಪಿಂಟೋ ಉದ್ಘಾಟಿಸಿ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಖಿಲರ್ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎ ನಝೀರ್, ನ್ಯಾಯವಾದಿ ಶಶಿಕಿರಣ್ ಜೈನ್ ಬೆಳ್ತಂಗಡಿ, ಡಿಡಿ ಗ್ರೂಪ್ಸ್ ಆಡಳಿತ ನಿರ್ದೇಶಕ ಸುಹೇಲ್, ಮೊಬೈಲ್ ಪ್ಯಾಲೇಸ್ ಮಾಲಕ ಉಮೇಶ್ ಪೂಜಾರಿ ಉಪಸ್ಥಿತರಿದ್ದು ಶುಭಕೋರಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಇಮ್ತಿಯಾಜ್ ಬೆಳ್ತಂಗಡಿ, ಸುಹೇಲ್ ಸಮಕ್ ಡೈನ್ ಬೆಳ್ತಂಗಡಿ, ಕಿಶಾನ್ ಭಟ್ ಕಟೀಲು,ಬದ್ರುದ್ದೀನ್ ಶಾಜ್ ಕಲೆಕ್ಷನ್ ಬೆಳ್ತಂಗಡಿ,ನಿತೇಶ್ ಎಸ್.ವಿ ಮೊಬೈಲ್ ಬೆಳ್ತಂಗಡಿ, ನಿಜಾಮ್ ರೋಯಲ್ ಝೋನ್ ಬೆಳ್ತಂಗಡಿ, ಪುತ್ತ ಬೆಳ್ತಂಗಡಿ ಹಾಗೂ ಇತರರು ಉಪಸ್ಥಿತರಿದ್ದು ಶುಭಕೋರಿದರು.

ರಾಯಲ್ ಝೋನ್ ಮಾಲಕ, ನಿರೂಪಕ ಮಹಮ್ಮದ್ ನಿಸಾರ್ ಸ್ವಾಗತಿಸಿ, ವಂದಿಸಿದರು. ಸಂಸ್ಥೆಯ ಪಾಲುದಾರರು ಅತಿಥಿ ಗಣ್ಯರನ್ನು ಸತ್ಕರಿಸಿದರು.

ಡಿಡಿ ಗ್ರೂಪ್ಸ್ ಸಂಸ್ಥೆಯು ಲಕ್ಕಿ ಸ್ಕೀಮ್ ನ್ನು ಮಾಡುತ್ತಿದ್ದು ರಾಜ್ಯಾದ್ಯಂತ ಹಲವಾರು ಶಾಖೆಗಳನ್ನು ತೆರದಿದ್ದಾರೆ. ತಿಂಗಳಿಗೆ ಒಂದು ಸಾವಿರದಂತೆ 20 ಕಂತು ಪಾವತಿಸಲು ಅವಕಾಶವಿದೆ. ಲಕ್ಕಿ ಡ್ರಾದಲ್ಲಿ ವಿಜೇತರಿಗೆ ಕಾರು, ದ್ವಿಚಕ್ರ ವಾಹನ, ಬಂಗಾರ, ಎಲೆಕ್ಟ್ರಾನಿಕ್ ಮುಂತಾದ ವಸ್ತುಗಳು ಸಿಗುತ್ತದೆ. ಕಂತು ಪಾವತಿಸಿ ಯಾವುದೇ ಬಹುಮಾನ ಬಾರದಿದ್ದರು ಕಟ್ಟಿದ ಮೊತ್ತದ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕರು ತಿಳಿಸಿದರು.

Related posts

ಪೆರಿಂಜೆ ಪಡ್ಯಾರಬೆಟ್ಟ ಕ್ಷೇತ್ರದಿಂದ ಪುಸ್ತಕ ವಿತರಣೆ

Suddi Udaya

ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್: ಉಜಿರೆಯ ಹಿಮಾನ್ಸ್ ಕುಮಿಟೆಯಲ್ಲಿ ದ್ವಿತೀಯ ಹಾಗೂ ಕಟಾದಲ್ಲಿ ಪ್ರಥಮ ಸ್ಥಾನ

Suddi Udaya

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಉಜಿರೆ ಎಸ್ ಡಿ ಎಮ್ ಶಾಲಾ ವಿದ್ಯಾರ್ಥಿ ಕ್ಷಿತಿಜ್ ಶೆಟ್ಟಿ ಕುಮಿಟೆ ಹಾಗು ಕಟಾ ವಿಭಾಗದಲ್ಲಿ ಬೆಳ್ಳಿ ಪದಕ

Suddi Udaya

ಹತ್ಯಡ್ಕ ತುಂಬೆತ್ತಡ್ಕ ಕಾಳಬೈರವ ಸ್ವಾಮಿ ಶ್ರೀ ಮಾರಿ ಅಮ್ಮನ ಮಾರಿಗುಡಿಯಲ್ಲಿ ವಾರ್ಷಿಕ ಮಾರಿ ಪೂಜೆ ಉತ್ಸವ

Suddi Udaya

ಧರ್ಮಸ್ಥಳ “ರಂಗಶಿವ”ಬಳಗದಿಂದ ಮಕ್ಕಳ ರಂಗ ಶಿಬಿರ “ನಲಿಯೋಣ ಬಾ- 2023”

Suddi Udaya

ಪಡಂಗಡಿ: ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಾಮೂಹಿಕ ಶನಿ ಪೂಜೆ

Suddi Udaya
error: Content is protected !!