ರಾಷ್ಟ್ರಮಟ್ಟದ ಚೆಸ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾದ ಶಿಬಾಜೆಯ ವಿರಾಜ್ ಜೆ ಪೂಜಾರಿ

Suddi Udaya

ಶಿಬಾಜೆ: ಶಿಬಾಜೆ ಗ್ರಾಮದ ಜಯರಾಮ ಪೂಜಾರಿ ಮತ್ತು ವನಜ ದಂಪತಿಯ ಪುತ್ರ, ವಿರಾಜ್ ಜೆ ಪೂಜಾರಿ ಯವರು ಕಲ್ಲಡ್ಕ ವಿದ್ಯಾಭಾರತಿ ಇಲ್ಲಿ ನಡೆಸಿದ ರಾಜ್ಯಮಟ್ಟದ ಚೆಸ್ ಚಾಂಪಿಯನ್ ನಲ್ಲಿ (ತರುಣ ವರ್ಗ) ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದ ಚೆಸ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿರುತ್ತಾರೆ.


ಅರುಣಾಚಲ ಪ್ರದೇಶದಲ್ಲಿ “ವಿದ್ಯಾಭಾರತಿ ಅಖಿಲ ಭಾರತಿಯ ಶಿಕ್ಷಾ ಸಂಸ್ಥಾನ್” ಅಕ್ಟೋಬರ್ 26ರಿಂದ 30ರವರೆಗೆ ನಡೆಸುವ 34ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾರೆ.

Leave a Comment

error: Content is protected !!