ಅಂಬರ ಮರ್ಲೆರ್” ರಿಟರ್ನ್ಸ್ ತುಳು ಧಾರಾವಾಹಿಯ ತಂಡಕ್ಕೆ ಶಾಸಕ ಹರೀಶ್ ಪೂಂಜರವರಿಂದ ಶುಭ ಹಾರೈಕೆ

Suddi Udaya

ಬೆಳ್ತಂಗಡಿ: ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರತೀ ಆದಿತ್ಯವಾರ ಮಧ್ಯಾಹ್ನ 01:30 ಗಂಟೆಗೆ ಪ್ರಸಾರವಾಗುವ ತುಳು ಹಾಸ್ಯ ಧಾರಾವಾಹಿ “ಅಂಬರ ಮರ್ಲೆರ್” ರಿಟರ್ನ್ಸ್ ತಂಡವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರನ್ನು ಭೇಟಿ ಮಾಡಿದರು.

ಈ ಸಂಧರ್ಭದಲ್ಲಿ ದೂರದರ್ಶನ ಚಂದನ ವಾಹಿನಿಯ ಮುಖಾಂತರ ಕರ್ನಾಟಕದಾದಂತ್ಯ ಇರುವ ತುಳು ಪ್ರೇಕ್ಷಕರನ್ನು ತಲುಪಿ ಈ ಹಾಸ್ಯ ಧಾರಾವಾಹಿಯ ಮೂಲಕ ಅವರನ್ನು ರಂಜಿಸುವ ಕಾರ್ಯ ಶ್ಲಾಘನೀಯ ಹಾಗೂ ಇನ್ನೂ ಹೆಚ್ಚಿನ ಯಶಸ್ಸು “ಅರ್ನ ಕ್ರಿಯೇಷನ್ಸ್” ತಂಡಕ್ಕೆ ಸಿಗಲಿ ಎಂದು ಶಾಸಕರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ಮಾಪಕರಾದ ಸುಂದರ್ ರೈ ಮಂದಾರ, ನಿರ್ದೇಶಕರಾದ ಪ್ರಜ್ವಲ್ ಕುಮಾರ್ ಅತ್ತಾವರ , ಉದ್ಯಮಿ ಚಂದ್ರ ಪ್ರಕಾಶ್ ಶೆಟ್ಟಿ ಗೇರುಕಟ್ಟೆ ಉಪಸ್ಥಿತರಿದ್ದರು.

Leave a Comment

error: Content is protected !!