ಮಾಜಿ ಸಚಿವ ಗಂಗಾಧರ ಗೌಡರವರ ಕಚೇರಿಯಲ್ಲಿ ಇಂದಿರಾ ಗಾಂಧಿ ಯವರ ಪುಣ್ಯಸ್ಮರಣೆ ಆಚರಣೆ

Suddi Udaya

ಬೆಳ್ತಂಗಡಿ: ಕೆ.ಪಿ.ಸಿ.ಸಿ ಉಪಾಧ್ಯಕ್ಷರು ಹಾಗೂ ಕರ್ನಾಟಕ ಸರಕಾರದ ಮಾಜಿ ಸಚಿವರು ಆದ ಕೆ. ಗಂಗಾಧರ ಗೌಡ ರವರ ಕಚೇರಿಯಲ್ಲಿ ಶ್ರೀಮತಿ ಇಂದಿರಾ ಗಾಂಧಿ ಯವರ ಪುಣ್ಯಸ್ಮರಣೆ ಅ. 31 ರಂದು ಗಂಗಾಧರ ಗೌಡ ರವರು ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.


ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ ಬಾಲ ಕೃಷ್ಣ ಗೌಡ ಸ್ವಾಗತಿಸಿದರು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಂಜನ್ ಜಿ. ಗೌಡ, ಪಕ್ಷದ ಮಾಜಿ ಅಧ್ಯಕ್ಷ, ಮಾಜಿ ಜಿ. ಪಂ. ಸದಸ್ಯ ಬಿ ರಾಜಶೇಖರ ಅಜ್ರಿ, ಮಾಜಿ ಜಿ. ಪಂ. ಸದಸ್ಯ ಇ. ಸುಂದರ ಗೌಡ, ಬ್ಲಾಕ್ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಕೆ. ಶೈಲೇಶ್ ಕುಮಾರ್, ಯುವ ನೇತಾರ ಅಭಿನಂದನ್ ಹರೀಶ್ ಕುಮಾರ್, ತಾ. ಪಂ.ಮಾಜಿ ಸದಸ್ಯ ಈಶ್ವರ ಭೈರ, ಕೆಪಿಸಿಸಿಯ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್, ತಾಲೂಕು ಸೇವಾದಳ ನಗರ ಅಧ್ಯಕ್ಷ ಎಂ.ಕೆ ಅಬ್ದುಲ್ ಸಮದ್ ಕುಂಡಡ್ಕ, ಬೆಳ್ತಂಗಡಿ ನಗರ ಕಾಂಗ್ರೆಸ್ ಕಾರ್ಮಿಕ ಘಟಕ ಅಧ್ಯಕ್ಷ ಮೆಹಬೂಬ್, ಬೆಳ್ತಂಗಡಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್, ಮೂಸ ಕುಂಙ್ಞಿ ನೆರಿಯ, ಮಹಮ್ಮದ್ ನೆರಿಯ, ಗ್ರಾ. ಪಂ. ಮಾಜಿ ಸದಸ್ಯ ಗುರುಪ್ರಸಾದ್ ಮಾಲಾಡಿ, ಶಬೀರ್ ಮಾಲಾಡಿ, ಉಜಿರೆ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಬಾಲಕೃಷ್ಣ ಗೌಡ, ಹಿರಿಯ ಕಾಂಗ್ರೆಸಿಗರಾದ ರಾಮಕೃಷ್ಣ ಗೌಡ, ಸಂತೋಷ್ ಕುಮಾರ್ ಜೈನ್, ಚಂದು ಎಲ್, ಮಚ್ಚಿನ ಪಂಚಾಯತ್ ಮಾಜಿ ಸದಸ್ಯರಾದ ಪ್ರೇಮ, ಕೆ.ಎಸ್ ಅಬ್ದುಲ್ಲ, ಮಾಜಿ ಭೂನ್ಯಾಯ ಮಂಡಳಿ ಸದಸ್ಯರಾದ ನಾರಣಪ್ಪ ಸವಣಾಲು, ಅಣ್ಣು ಲಾಯಿಲ, ಚಾರ್ಲಿ ನಡ ಮುಂತಾದ ಕಾಂಗ್ರೆಸ್ಸಿನ ಕಾರ್ಯಕರ್ತರು ಭಾಗವಹಿಸಿ ದಿವಗಂತ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಯವರಿಗೆ ನಮನ ಸಲ್ಲಿಸಿದರು.

ಕೊನೆಯಲ್ಲಿ ಲಕ್ಷ್ಮಣ ಪಂಡಿಜೆ ವಂದಿಸಿದರು.

Leave a Comment

error: Content is protected !!