April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಕ್ಸೆಲ್ ನಲ್ಲಿ ಅಮೆರಿಕಾ ವಿಜ್ಞಾನಿಗಳ ಜೊತೆ ಸಂವಾದ

ಬೆಳ್ತಂಗಡಿ: ‘ ಉನ್ನತ ಶಿಕ್ಷಣ ಪಡೆದು, ಸಂಶೋಧನಾ ಕ್ಷೇತ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳಿವೆ. ಬಯೋ ಕೆಮಿಸ್ಟ್ರಿ ಅಧ್ಯಯನದಲ್ಲಿ ರಕ್ತದಲ್ಲಿರುವ ಸುಮಾರು ಎರಡು ಸಾವಿರ ಪ್ರೊಟೀನ್ ಗಳ ಗುಣಲಕ್ಷಣಗಳನ್ನು ಅರಿತು ದೇಹದ ಕಾಯಿಲೆಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಆವಿಷ್ಕಾರವಾಗಿದೆ. ಬಯೋಪ್ಸಿ ಮಾಡದೆ ದೇಹದೊಳಗಿನ ರೋಗ ಪತ್ತೆ ಮಾಡುವ ವಿಧಾನಕ್ಕೆ ಇದು ಪೂರಕವಾಗಿದೆ. ಜೀನ್ ಗಳ ರಚನೆ, ಪ್ರೊಟೀನ್ ಗಳ ರಚನೆ ಮೊದಲಾದ ಕ್ಷೇತ್ರಗಳಲ್ಲಿ ಇತ್ತೀಚಿನ ವೈದ್ಯಕೀಯ ಅಧ್ಯಯನ ಗಳು ಸೂಕ್ಷ್ಮಾತಿಸೂಕ್ಷ್ಮ ವಾಗಿ ಬೆಳೆಯುತ್ತಿವೆ ‘. ಎಂದು ಅಮೆರಿಕಾದ ಮೇರಿ ಲ್ಯಾಂಡ್ ನ ಪ್ರೋಟಿಯೋಮಿಕ್ಸ್ ಇಂಕಂಪ್ಲೀಟ್ ಒಮಿಕ್ಸ್ ಸಂಶೋಧನಾ ಕೇಂದ್ರದ ಉಪಾಧ್ಯಕ್ಷರಾದ ಡಾ. ರಘೋತ್ತಮ ಅವರು ಹೇಳಿದರು. ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಮೆರಿಕಾದ ಡೆಲ್ವಾರೆ ಯೂನಿವರ್ಸಿಟಿ ಯ ನ್ಯೂರಾಲಜಿಕ್ ಫಿಸಿಕಲ್ ಥೆರಪಿ ವಿಭಾಗದ ನಿರ್ದೇಶಕರಾದ ಡಾ. ಸೌಮ್ಯ ಅವರು ಮಾತನಾಡಿ ‘ ಶಸ್ತ್ರ ಚಿಕಿತ್ಸೆಯ ನಂತರ ದೇಹವನ್ನು ಪುನಃ ಸಾಮಾನ್ಯ ಸ್ಥಿತಿಗೆ ತರುವಲ್ಲಿ ಫಿಸಿಯೋಥೆರಪಿ ಮಹತ್ತ್ವವನ್ನು ವಿವರಿಸಿದರು.

ಸಂವಾದದ ಬಳಿಕ ವಿಜ್ಞಾನಿಗಳನ್ನು ಗೌರವಿಸಲಾಯಿತು.

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ , ಆಡಳಿತಾಧಿಕಾರಿ ಪುರುಷೋತ್ತಮ್ , ಕ್ಯಾಂಪಸ್ ಮನೇಜರ್ ಶಾಂತಿರಾಜ್ ಜೈನ್, ಆಡಳಿತ ಮಂಡಳಿಯ ಸಹನಾ ಜೈನ್ , ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.

Related posts

ಮರೋಡಿ: ಸಾಕು ನಾಯಿಗಳಿಗೆ ಉಚಿತ ಹುಚ್ಚು ರೋಗ ನಿರೋಧಕ ಲಸಿಕಾ ಕಾರ್ಯಕ್ರಮ

Suddi Udaya

ಓಡಲ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ

Suddi Udaya

ಮೇಲಂತಬೆಟ್ಟು ಕಲ್ಲಿನ‌ ಕೋರೆ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ; ಜು.8 ಮಾರಿಗುಡಿ ಕ್ಷೇತ್ರದಲ್ಲಿ ಪ್ರಮಾಣ; ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹೇಳಿಕೆ

Suddi Udaya

ಡಿ.3: ಬಂಟರಯಾನೆ ನಾಡವರ ಸಂಘ ಬೆಳ್ತಂಗಡಿ ಆಶ್ರಯದಲ್ಲಿ ಬಂಟೋತ್ಸವ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

Suddi Udaya

ಮೇಲಂತಬೆಟ್ಟು ತ್ರಿವೇಣಿ ಸಂಜೀವಿನಿ ಮಹಿಳಾ ಗ್ರಾ.ಪಂ. ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ದ. ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ: ಡಾ.ಹೆಗ್ಗಡೆಯವರಿಂದ ಸಮ್ಮೇಳನದ ಲಾಂಛನ ಬಿಡುಗಡೆ

Suddi Udaya
error: Content is protected !!