ಕಲ್ಮಂಜ : ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯಾರಂಭ

Suddi Udaya

ಕಲ್ಮಂಜ: ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ ಕಾರ್ಯಾರಂಭ ನವೆಂಬರ್ 1,2023 ನೇ ಬುಧವಾರ ನೆರವೇರಿತು.

ಅ ಮೂಲಕ ದೇವರಗುಡ್ಡೆ ಭಾಗದ ಜನರ ಬಹುವರ್ಷಗಳ ಕನಸು ಈಡೇರಿದಂತೆ ಆಗಿದೆ.ಸಂಘದ ಅಧ್ಯಕ್ಷ ರಮೇಶ್ ಗೌಡ ಗುಲ್ಲೋಡಿಯವರು ಹಾಲು ಶೇಖರಣೆ ಮೂಲಕ ಕಾರ್ಯಾರಂಭ ಮಾಡಿದರು.

ಉಪಾಧ್ಯಕ್ಷರಾದ ಸೂರ್ಯನಾರಾಯಣ ಹೊಳ್ಳ ಮತ್ತು ದ.ಕ.ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಸತೀಶ್ ರಾವ್ ಅವರು ಸದಸ್ಯರಿಗೆ ಷೇರು ಪ್ರಮಾಣ ಪತ್ರ ಹಂಚಿಕೆ ಮಾಡಿದರು.

ಈ ಸಂದರ್ಭ ಒಕ್ಕೂಟದ ವಿಸ್ತರಣಾಧಿಕಾರಿ ಯಮುನಾ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಚಿನ್ ಗೌಡ ಕಲ್ಮಂಜ ಹಾಗೂ ನಿರ್ದೇಶಕರಾದ ಶಿವಪ್ರಸಾದ್,ರಾಧಾಕೃಷ್ಣ ಗೌಡ,ಮಂಜುನಾಥ್ ಗುಡಿಗಾರ್,ಗೀತಾ ನಾಯ್ಕ,ಪುಷ್ಪವತಿ,ಶ್ರೀನಿವಾಸ ಗೌಡ,ಗಂಗಾಧರ ಗೌಡ,ದೇಜಪ್ಪ ಪೂಜಾರಿ,ರಾಘವೇಂದ್ರ ವಿಷ್ಣು ನಾಯ್ಕ್ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಮಲ,ಗಣ್ಯರಾದ ಪೃಥ್ವಿಶ್ ಧರ್ಮಸ್ಥಳ,ಕೃಷ್ಣಪ್ಪ ಗುಡಿಗಾರ್,ತುಕಾರಾಮ ಸಾಲಿಯಾನ್,ಸುಂದರ ಗೌಡ ಹಾಗೂ ಸಂಘದ ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು.

Leave a Comment

error: Content is protected !!