25.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಜೊಜಿಲಾ ದಿನಾಚರಣೆ : ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗಿ

ಬೆಳ್ತಂಗಡಿ: ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಅಕ್ಟೋಬರ್ 31ಮತ್ತು ನವಂಬರ್ 1ರಂದು ನಡೆದ
ಜೊಜಿಲಾ ದಿನಾಚರಣೆಯಲ್ಲಿ ಮುಖ್ಯ ಅತಿಥಿ ಯಾಗಿ ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗವಹಿಸಿದ್ದರು.

ಭಾರತದ ಸೇನಾಪಡೆಯ11ನೇ ತೋಪುಖಾನಾ (ಆರ್ಟಿಲ್ಲರಿ) ಸೇನಾಪಡೆಯು ಜೊಜಿಲಾ ಬೆಟ್ಟಪ್ರದೇಶಗಳಲ್ಲಿ ಅತಿಕ್ರಮವಾಗಿ ಒಳನುಸುಳಿ ಕುಳಿತ್ತಿದ್ದ ಪಾಕಿಸ್ತಾನದ ಸೇನೆಯನ್ನು ಹೊರಹಾಕಿ ಆಯಕಟ್ಟಿನ ಈ ಪ್ರದೇಶವನ್ನು ಭಾರತದ ಸ್ವಾಧೀನ ಪಡಿಸಿಕೊಂಡ ಸೇನಾ ಕಾರ್ಯಾಚರಣೆಯ ಘಟಕಗಳನ್ನು ಜೊಜಿಲಾ ರೆಜಿಮೆಂಟ್ ಎಂಬ ಬಿರುದಿನೊಂದಿಗೆ ಭಾರತ ಸರಕಾರದಿಂದ ಗುರುತಿಸಲ್ಪಟ್ಟ ದಿನವನ್ನು ಜೊಜಿಲಾ ದಿನವನ್ನಾಗಿ ಆಚರಿಸಲ್ಪಡುತ್ತದೆ.

ಈ ಕಾರ್ಯಾಚರಣೆಯಲ್ಲಿ ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಅವರು ಸೇವೆಸಲ್ಲಿಸಿದ ರೆಜಿಮೆಂಟ್ ಬಹಳ ಪ್ರಮುಖ ಪಾತ್ರ ನಿರ್ವಹಿಸಿದ್ದು, ಅದರ ಸ್ಮರಣಾರ್ಥ ಕಾರ್ಯಾಚರಣೆ ಯಲ್ಲಿ ದೇಶಕ್ಕಾಗಿ ಅಮರರಾದವರನ್ನು ನೆನಪಿಸುತ್ತ ಅವರೆಲ್ಲರಿಗೆ ಶ್ರಧ್ಜಾಂಜಲಿ ಸಲ್ಲಿಸಿ ಆಚರಿಸುವ ದಿನವನ್ನು ಈ ವರ್ಷ ಕೇರಳದಕಲ್ಲಿಕೊಟೆ(ಕೋಝಿಕೋಡ್) ನಲ್ಲಿ ಆಚರಿಸಲಾಯಿತು.

Related posts

ಮೇದೋಜಿರಕ ಗ್ರಂಥಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಉಪನ್ಯಾಸಕ ನಂದಕುಮಾರ್ ಚಿಕಿತ್ಸೆಗೆ ಸ್ಪಂದಿಸದೆ ನಿಧನ

Suddi Udaya

ಹೊಸಂಗಡಿ: ವಲಯ ಮಟ್ಟದ ಪದಗ್ರಹಣ ಸಮಾರಂಭ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ಜೆಡಿಎಸ್ ಚುನಾವಣಾ ಕಚೇರಿ ಪ್ರಾರಂಭ

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆ

Suddi Udaya
error: Content is protected !!