September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಜೊಜಿಲಾ ದಿನಾಚರಣೆ : ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗಿ

ಬೆಳ್ತಂಗಡಿ: ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಅಕ್ಟೋಬರ್ 31ಮತ್ತು ನವಂಬರ್ 1ರಂದು ನಡೆದ
ಜೊಜಿಲಾ ದಿನಾಚರಣೆಯಲ್ಲಿ ಮುಖ್ಯ ಅತಿಥಿ ಯಾಗಿ ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗವಹಿಸಿದ್ದರು.

ಭಾರತದ ಸೇನಾಪಡೆಯ11ನೇ ತೋಪುಖಾನಾ (ಆರ್ಟಿಲ್ಲರಿ) ಸೇನಾಪಡೆಯು ಜೊಜಿಲಾ ಬೆಟ್ಟಪ್ರದೇಶಗಳಲ್ಲಿ ಅತಿಕ್ರಮವಾಗಿ ಒಳನುಸುಳಿ ಕುಳಿತ್ತಿದ್ದ ಪಾಕಿಸ್ತಾನದ ಸೇನೆಯನ್ನು ಹೊರಹಾಕಿ ಆಯಕಟ್ಟಿನ ಈ ಪ್ರದೇಶವನ್ನು ಭಾರತದ ಸ್ವಾಧೀನ ಪಡಿಸಿಕೊಂಡ ಸೇನಾ ಕಾರ್ಯಾಚರಣೆಯ ಘಟಕಗಳನ್ನು ಜೊಜಿಲಾ ರೆಜಿಮೆಂಟ್ ಎಂಬ ಬಿರುದಿನೊಂದಿಗೆ ಭಾರತ ಸರಕಾರದಿಂದ ಗುರುತಿಸಲ್ಪಟ್ಟ ದಿನವನ್ನು ಜೊಜಿಲಾ ದಿನವನ್ನಾಗಿ ಆಚರಿಸಲ್ಪಡುತ್ತದೆ.

ಈ ಕಾರ್ಯಾಚರಣೆಯಲ್ಲಿ ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಅವರು ಸೇವೆಸಲ್ಲಿಸಿದ ರೆಜಿಮೆಂಟ್ ಬಹಳ ಪ್ರಮುಖ ಪಾತ್ರ ನಿರ್ವಹಿಸಿದ್ದು, ಅದರ ಸ್ಮರಣಾರ್ಥ ಕಾರ್ಯಾಚರಣೆ ಯಲ್ಲಿ ದೇಶಕ್ಕಾಗಿ ಅಮರರಾದವರನ್ನು ನೆನಪಿಸುತ್ತ ಅವರೆಲ್ಲರಿಗೆ ಶ್ರಧ್ಜಾಂಜಲಿ ಸಲ್ಲಿಸಿ ಆಚರಿಸುವ ದಿನವನ್ನು ಈ ವರ್ಷ ಕೇರಳದಕಲ್ಲಿಕೊಟೆ(ಕೋಝಿಕೋಡ್) ನಲ್ಲಿ ಆಚರಿಸಲಾಯಿತು.

Related posts

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ಗೆ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ

Suddi Udaya

ಮರೋಡಿ ಗ್ರಾ.ಪಂನಿಂದ ಪೆರಾಡಿಯಲ್ಲಿ ನಿರ್ಮಿಸಲಾದ ರೂ.5.60 ಲಕ್ಷ ವೆಚ್ಚದ ಸೋಲಾರ್ ದೀಪ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

Suddi Udaya

ಮಡಂತ್ಯಾರು ಮಿತ್ರಾ ವ್ಹೀಲ್ ಮಾಸ್ಟರ್ ಶುಭಾರಂಭ

Suddi Udaya

ಮೂರುಗೋಳಿ ಶ್ರೀ ಪಾಂಡುರಂಗ ಭಜನಾ ಮಂದಿರದ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಪೂರ್ವಭಾವಿ ಸಭೆ

Suddi Udaya

ಮೀಯಾರು ಕೆಮ್ಮಟ್ಟೆಯಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಟ್ರಸ್ಟ್ ವತಿಯಿಂದ ನೀರು ಉಳಿಸಿ ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ

Suddi Udaya

ಎಸ್.ಡಿ.ಎಂ. ಬಿ.ಎಡ್ , ಡಿ.ಇಎಲ್.ಇಡಿ ಹಾಗೂ ಶ್ರೀ ಧ.ಮಂ. ಮಹಿಳಾ ಐಟಿಐ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಕ್ರೀಡಾಕೂಟ

Suddi Udaya
error: Content is protected !!