23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ವಕೀಲರ ಸಂಘದ ನೇತೃತ್ವದಲ್ಲಿ – ವಸಂತ ಮರಕಡ ಅಧ್ಯಕ್ಷತೆಯ 2023-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ

ಬೆಳ್ತಂಗಡಿ: ವಕೀಲರ ಸಂಘ ಬೆಳ್ತಂಗಡಿ ಇದರ 2023-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನ. 4ರಂದು ಬೆಳ್ತಂಗಡಿ ಎಸ್.ಡಿ.ಎಂ ಕಲಾ ಭವನದಲ್ಲಿ ಜರುಗಿತು. ‌‌ಅಧ್ಯಕ್ಷತೆಯನ್ನು ದೇವರಾಜು ಎಚ್.ಎಂ. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ, ಬೆಳ್ತಂಗಡಿ ವಹಿಸಿದ್ದರು.

ಉದ್ಘಾಟನೆಯನ್ನು ಮಹೇಶ್ ಕಜೆ ವಕೀಲರು, ಇಡಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಂದೇಶ್ ಕೆ. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ, ಬೆಳ್ತಂಗಡಿ, ವಿಜಯೇಂದ್ರ ಟಿ.ಹೆಚ್ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಬೆಳ್ತಂಗಡಿ , ಶ್ರೀಹರಿ ಮುಗೇರಾಯ ನ್ಯಾಯವಾದಿ, ಕಾರ್ಕಳ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಕೆ. ಪೃಥ್ವಿರಾಜ್ ರೈ ಅಧ್ಯಕ್ಷರು, ವಕೀಲರ ಸಂಘ ಮಂಗಳೂರು, ಎಂ.ಕೆ. ದೇವೇಂದ್ರ ಕುಮಾರ್ ಅಧ್ಯಕ್ಷರು, ವಕೀಲರ ಸಂಘ ಮೂಡುಬಿದಿರೆ, ಕೃಷ್ಣಪ್ಪ ಉಪಾಧ್ಯಕ್ಷರು, ವಕೀಲರ ಸಂಘ ಪುತ್ತೂರು, ನಾರಾಯಣ ಕೆ.ಅಧ್ಯಕ್ಷರು, ವಕೀಲರ ಸಂಘ ಸುಳ್ಯ ರಾಜೇಶ್ ಬೊಳ್ಳುಕಲ್ಲು ಉಪಾಧ್ಯಕ್ಷರು, ಬಂಟ್ವಾಳ ವಕೀಲರ ಸಂಘ ಭಾಗವಹಿಸಿದ್ದರು. ನೂತನ ಅಧ್ಯಕ್ಷ ವಸಂತ ಮರಕಡ, ನವೀನ್ ಬಿ.ಕೆ. ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ‌ಅಶೋಕ್ ಕರಿಯನೆಲ, ಜೊತೆ ಕಾರ್ಯದರ್ಶಿ ವಿನಯ್ ಕುಮಾರ್, ಕೋಶಾಧಿಕಾರಿ ಪ್ರಶಾಂತ್ ಎಂ.ಅಲೋಶಿಯಸ್ ಎಸ್. ಲೋಬೋ ಅಧ್ಯಕ್ಷರು ಹಿರಿಯ ವಕೀಲರ ಸಮಿತಿ, ಸ್ವರ್ಣಲತಾ ಕಾಯದಶಿ೯, ಸದಸ್ಯ ಶಶಿಕಿರಣ್ ಜೈನ್ ಪದಗ್ರಹಣ ಸ್ವೀಕರಿಸಿದರು. ಶೈಲೇಶ್ ಆರ್.ಠೋಸರ್ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು. ಧನಂಜಯ ರಾವ್ ಕಾಯ೯ಕ್ರಮ ನಿರೂಪಿಸಿದರು. ನೂತನ ಕಾಯ೯ದಶಿ೯ ನವೀನ್ ಬಿ.ಕೆ ಧನ್ಯವಾದವಿತ್ತರು.ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಕೀಲರ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

Related posts

ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಿಶೇಷ ತರಗತಿಯ ಸಮಾರೋಪ ಕಾರ್ಯಕ್ರಮ

Suddi Udaya

ಪಾರೆಂಕಿ: ಹಾರಬೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ

Suddi Udaya

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

Suddi Udaya

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೆಯರ್ ವಿತರಣೆ

Suddi Udaya

ಆ.14: ಕೊಕ್ಕಡದಲ್ಲಿ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಪಂಜಿನ ಮೆರವಣಿಗೆ

Suddi Udaya
error: Content is protected !!