ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ನೂತನ ಅನ್ನಛತ್ರ ಉದ್ಘಾಟನೆ

Suddi Udaya

Updated on:

ಶಿಶಿಲ : ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಅನ್ನಛತ್ರದ ಉದ್ಘಾಟನಾ ಕಾರ್ಯಕ್ರಮವು ನ.6 ರಂದು ನಡೆಯಿತು.

ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜರವರು ಉದ್ಘಾಟಿಸಿ, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.5 ಲಕ್ಷ ಅನುದಾನವನ್ನು ಯೋಜನಾಧಿಕಾರಿ ಸುರೇಂದ್ರ , ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿನಿಧಿ ಗಾಯತ್ರಿ ರವರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ಮೂಡೆತ್ತಾಯರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅರ್ಚಕ ಸದಸ್ಯರಾದ ಪಿ ರಾಮ ಕಾರಂತ, ಸದಸ್ಯರಾದ ಕೆ. ರಾಧಕೃಷ್ಣ ಭಟ್, ಕೆ. ಆನಂದ ಪೂಜಾರಿ, ಚಂದ್ರಶೇಖರ್ ಗೌಡ ಧರ್ಮಸ್ಥಳ, ಎಂ. ಮೋಹನ್ ಜೋಷಿ, ಬಾಲಕೃಷ್ಣ ಎಂ.ಕೆ ಶ್ರೀಮತಿ ವೀಣಾ ಪಿ. ಉಪಾಧ್ಯಾಯ, ಶ್ರೀಮತಿ ಉಮಾವತಿ ಜಿ. ಗೌಡ, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Comment

error: Content is protected !!