September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಸರ್ಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ

ಬೆಳ್ತಂಗಡಿ : ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇಲ್ಲಿ ವಿವೇಕ ಶಾಲಾ ಯೋಜನೆಯ ಅಡಿಯಲ್ಲಿ 2022-23ರಲ್ಲಿ ಮಂಜೂರಾದ ಆರು ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ನ. 6 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರಿಂದ ನೆರವೇರಿಸಿ ಮಾತನಾಡಿ ಬೆಳ್ತಂಗಡಿಯ ಹೃದಯ ಭಾಗದಲ್ಲಿರುವ ಈ ಮಾದರಿ ಶಾಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಹಿಂದಿನಂತೆಯೆ ಮುಂದೆಯೂ ಸಹ ತಮ್ಮ ಸಹಕಾರ ಯಾವಾಗಲೂ ಇರುವುದಾಗಿ ಭರವಸೆಯನ್ನು ನೀಡಿದರು.

ವೇದಿಕೆಯಲ್ಲಿ ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಕೇಸರಿರವರು, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಮೋಹನ್ ಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ವಾರಿಜಾ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನೀನಾ ಕುಮಾರ್, ಮುಖ್ಯ ಶಿಕ್ಷಕರಾದ ಸೂರ್ಯನಾರಾಯಣ ಪುತ್ತೂರಾಯರು, ಕಟ್ಟಡದ ಕಂಟ್ರಾಕ್ಟರ್ ಅಬ್ದುಲ್ ರಜಾಕ್ ರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟ್ಟಡ ಮಂಜೂರಾತಿಯಲ್ಲಿ ಶಾಸಕರ ನೆರವನ್ನು ನೆನೆದು ಅವರಿಗೆ ಕಿರು ಸನ್ಮಾನವನ್ನು ಮಾಡಲಾಯಿತು. ಹಾಗೆ ಕ್ಲಪ್ತ ವೇಳೆಯಲ್ಲಿ ಕಟ್ಟಡವನ್ನು ಪೂರ್ಣಗೊಳಿಸಿದ ಕಂಟ್ರಾಕ್ಟರ್ ಅವರಿಗೂ ಕಿರು ಕಾಣಿಕೆಯನ್ನು ನೀಡಲಾಯಿತು.

ಈ ಸಮಯದಲ್ಲಿ ವಿಶೇಷ ಚೇತನವುಳ್ಳ ಮಕ್ಕಳಿಗೆ ಇಲಾಖಾ ವತಿಯಿಂದ ಕೊಡ ಮಾಡಲ್ಪಡುವ ಸಾಧಾರಣ ಸಲಕರಣೆಗಳನ್ನು ಶಾಸಕರು ವಿತರಿಸಿದರು. BIERT ಜಗದೀಶ್ ರವರು ಈ ಮಕ್ಕಳಿಗೆ ಸಿಗುವ ಸೌಲತ್ತುಗಳ ಬಗ್ಗೆ ವಿವರಿಸಿದರು. ಇಲಾಖಾ ಪರವಾಗಿ ಶ್ರೀಮತಿ ತಾರಕೇಸರಿರವರು ಶುಭವನ್ನು ಹಾರೈಸಿದರು.

ಶಾಲಾ ಮುಖ್ಯ ಶಿಕ್ಷಕರು ಸ್ವಾಗತಿಸಿ, ಶಿಕ್ಷಕಿ ವಿದ್ಯಾ ಶೆಣೈ ವಂದನಾರ್ಪಣೆ ಮಾಡಿ ಶಿಕ್ಷಕಿ ಶುಭಾರವರು ನಿರೂಪಿಸಿದರು.

Related posts

ಪ್ರತಿಭಾ ಕಾರಂಜಿ ಸ್ಪರ್ಧೆ: ಶ್ರೀ ಭಾರತೀಯ ಆಂ.ಮಾ. ಪ್ರೌಢಶಾಲೆಯ ಹಿರಿಯ ಪ್ರಾಥಮಿಕ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

Suddi Udaya

ಗೋವಾದಲ್ಲಿ ಯಕ್ಷ ಕಲರವ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

Suddi Udaya

ಶಿಬಾಜೆ ಗ್ರಾ.ಪಂ. ಅಧ್ಯಕ್ಷರಾಗಿ ರತ್ನ, ಉಪಾಧ್ಯಕ್ಷರಾಗಿ ದಿನಕರ್ ಆಯ್ಕೆ

Suddi Udaya

ಫ್ಯಾಷನ್ ಡಿಸೈನ್ ನಲ್ಲಿ ಮಂಗಳೂರು ವಿ.ವಿ. ಗೆ 3ನೇ ರ‍್ಯಾಂಕ್ ಪಡೆದ ಉಜಿರೆಯ ಹವನ ಪಿ. ಪೂಜಾರಿ

Suddi Udaya

ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಚರಣೆ : ಬಿಜೆಪಿ ಗರ್ಡಾಡಿ ಶಕ್ತಿ ಕೇಂದ್ರ ವತಿಯಿಂದ ದೇವರಿಗೆ ವಿಶೇಷ ಪೂಜೆ

Suddi Udaya

ಮೂರು ಜನ ವಿಶೇಷ ಚೇತನರನ್ನು ಒಳಗೊಂಡ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ನೆರವು

Suddi Udaya
error: Content is protected !!