ಸಾಮಾಜಿಕ ಹೋರಾಟಗಾರ ಎಲ್ಯಣ್ಣ ಮಲೆಕುಡಿಯ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ: ಸಾಮಾಜಿಕ ಹೋರಾಟಗಾರ, ಮಲೆಕುಡಿಯ ಸಂಘದ ಸ್ಥಾಪಕ ಸದಸ್ಯರಾಗಿ, ಮಾಜಿ ಅಧ್ಯಕ್ಷರಾಗಿ, ಜಿಲ್ಲೆ ಹಾಗೂ ರಾಜ್ಯ ಸಂಘಟನೆಯಲ್ಲಿ ಪ್ರಮುಖರಾಗಿದ್ದ ಎಲ್ಯಣ್ಣ ಮಲೆಕುಡಿಯ (6೦ವ) ಅವರು ನ.7ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದವರು.


ನೆರಿಯದಲ್ಲಿ ಕೊಲೋಡಿ ಪ್ರದೇಶಕ್ಕೆ ಖಾಸಗಿ ವ್ಯಕ್ತಿ ಹಲವು ವರ್ಷಗಳಿಂದ ಹಿಂದೆ ಹಾಕಿದ್ದ ಗೇಟ್‌ನ್ನು ತೆರವುಗೊಳಿಸುವಲ್ಲಿ ಇವರ ನೇತೃತ್ವದಲ್ಲಿ ನಡೆದ ನಿರಂತರ ಹೋರಾಟದ ನಂತರ ತಾಲೂಕು ಆಡಳಿತ ಗೇಟನ್ನು ತೆರವುಗೊಳಿಸಲಾಗಿತ್ತು.

ಇವರು ನಾಗರಿಕ ಸೇವಾ ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯರಾಗಿ, ಸತ್ಯಮೇವ ಜಯತೆ ಸಂಘಟನೆಯ ಸಂಚಾಲಕರಲ್ಲಿ ಒಬ್ಬರಾಗಿ ಹಲವಾರು ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಅವಿವಾಹಿತರಾಗಿದ್ದ ಮೃತರು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!