ನ.13: ದೀಪಾವಳಿ ಹಬ್ಬದ ಪ್ರಯುಕ್ತ ಕುಸಲ್ದ ಜವನೆರ್ ಬದ್ಯಾರು – ಶಿರ್ಲಾಲು ಇದರ ವತಿಯಿಂದ 5ನೇ ವರ್ಷದ ‘ಕೆಸರ್ ಡೊಂಜಿ ಕುಸಲ್ದ ಗೊಬ್ಬು’ ಕಾರ್ಯಕ್ರಮ

Suddi Udaya

ಶಿರ್ಲಾಲು: ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಕುಸಲ್ದ ಜವನೆರ್ ಬದ್ಯಾರು – ಶಿರ್ಲಾಲು ಇದರ ವತಿಯಿಂದ 5ನೇ ವರ್ಷದ ‘ಕೆಸರ್ ಡೊಂಜಿ ಕುಸಲ್ದ ಗೊಬ್ಬು’ ಕಾರ್ಯಕ್ರಮವು ನ. 13 ರಂದು 10 ಗಂಟೆಗೆ “ನಲ್ಲಾರಗುತ್ತು ಬಾಕಿಮಾರ್” ಗದ್ದೆಯಲ್ಲಿ ನಡೆಯಲಿದೆ.


ಕಾರ್ಯಕ್ರಮದ ಉದ್ಘಾಟನೆಯನ್ನುಮೋನಪ್ಪ ಮೂಲ್ಯ ನಲ್ಲಾರಗುತ್ತು ರವರು ಮಾಡಲಿದ್ದಾರೆ. ಅಧ್ಯಕ್ಷರಾಗಿ ಲೋಕನಾಥೇಶ್ವರ ಭಜನಾ ಮಂಡಳಿ ಬದ್ಯಾರು ಇದರ ಅಧ್ಯಕ್ಷರಾದ ಜಗನ್ನಾಥ್ ಕುಲಾಲ್ ಬೈರೊಟ್ಟು ವಹಿಸಲಿದ್ದಾರೆ.
ಕೆಸರು ಗದ್ದೆ ಕ್ರೀಡಾಕೂಟದ ಉದ್ಘಾಟನೆಯನ್ನು ತುಳುನಾಡು ಒಕ್ಕೂಟ ಬೆಳ್ತಂಗಡಿ ಸ್ಥಾಪಕ ಅಧ್ಯಕ್ಷರಾದ ಶೈಲೇಶ್ ಆರ್.ಜೆ ರವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ. ಕ್ಷೇ.ಧ.ಗ್ರಾ. ಯೋಜನೆ ಚಿತ್ರದುರ್ಗ ಇದರ ಯೋಜನಾಧಿಕಾರಿಗಳು ಪ್ರವೀಣ್ ಎ.ಜೆ, ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಬದ್ಯಾರು ಇದರ ಕಾರ್ಯದರ್ಶಿ ಸದಾಶಿವ ಶಿವಗಿರಿ ಮತ್ತು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಬದ್ಯಾರು ಇದರ ಮಾಜಿ ಅಧ್ಯಕ್ಷರಾದ ಸುರೇಶ್ ಮೂಲ್ಯ ಕೊಚ್ಚೊಟ್ಟು ವಹಿಸಲಿದ್ದಾರೆ.

ಕಾರ್ಯಕ್ರಮದ ವಿಶೇಷತೆ: ಕೆಸರು ಗದ್ದೆ ಕ್ರೀಡಾಕೂಟ, ಮಕ್ಕಳಿಗೆ ಗ್ರಾಮೀಣ ಕ್ರೀಡಾಕೂಟ , ಕಂಬಳದ ಕೋಣಗಳ ಓಟ ನಡೆಯಲಿದೆ.

Leave a Comment

error: Content is protected !!