ಕುಂಬಾರರ ಸೇವಾ ಸಂಘದ ಮಾಸಿಕ ಸಭೆ: ಸಂಘದ ಅಧ್ಯಕ್ಷ ಹೆಚ್. ಪದ್ಮಕುಮಾರ್ ಅಧ್ಯಕ್ಷತೆ

Suddi Udaya

Updated on:

ಬೆಳ್ತಂಗಡಿ : ಕುಂಬಾರರ ಸೇವಾ ಸಂಘದ ಮಾಸಿಕ ಸಭೆಯು ನ.12ರಂದು ಸಂಘದ ಸದಸ್ಯರಾದ ಸಂಜೀವ ಎನ್. ರವರ ಮನೆಯಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಹೆಚ್. ಪದ್ಮಕುಮಾರ್ ರವರು ವಹಿಸಿದ್ದರು. ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿ ರಾಜು ಬಿ. ಹೆಚ್. ರವರು ಸ್ವಾಗತಿಸಿದರು. ಅಧ್ಯಕ್ಷರು ದೀಪಾವಳಿಯ ಶುಭಾಶಯಗಳೊಂದಿಗೆ ಮಾತನಾಡುತ್ತಾ, ಎಲ್ಲ ಸದಸ್ಯರು ಮುಂದಿನ ಸಭೆಯಲ್ಲಿ ಭಾಗವಸುವಂತೆ ವಿನಂತಿಸಿದರು. ಉಪಾಧ್ಯಕ್ಷರಾದ ಕೃಷ್ಣಪ್ಪ ರವರು ಸಂಘಕ್ಕೆ ಟೇಬಲ್ ಒಂದನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು. ಸಂಘದ ಕೋಶಧಿಕಾರಿ ಸಂಜೀವ ರವರು ಉಚಿತವಾಗಿ 5 ಚೇರ್, ಅಧ್ಯಕ್ಷರು 10 ಚೇರ್, ಹರೀಶ್ 5 ಚೇರ್, ವಸಂತ ಹೇಬೆ 1, ಭಾಸ್ಕರ್ 1, ಸಂಜೀವ ಹೇಬೆ 1, ಹಾಗೂ ಸಾಂತಪ್ಪ ಸಂಜಯ ನಗರ 3 ಮತ್ತು ಬೊಮ್ಮಯ್ಯ ಉದಯ ನಗರ 1 ಚಯರ್ ಗಳನ್ನು ನೀಡುವುದಾಗಿ ಹೇಳಿದರು.ದಾನಿಗಳಿಗೆ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಮಾಡುವ ಬಗ್ಯೆ ಚಿಂತಿಸಲಾಗುವುದೆಂದು ತಿಳಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ವಂದಿಸಿದರು.

Leave a Comment

error: Content is protected !!