ಬಂದಾರು ಶ್ರೀ ರಾಮ ನಗರ ಜೈ ಶ್ರೀ ರಾಮ್ ಗೆಳೆಯರ ಬಳಗದಿಂದ ಸಾಮೂಹಿಕ ದೀಪಾವಳಿ ಆಚರಣೆ

Suddi Udaya

ಬಂದಾರು : ಜೈ ಶ್ರೀ ರಾಮ್ ಗೆಳೆಯರ ಬಳಗ ಶ್ರೀ ರಾಮ ನಗರ ಬಂದಾರು ಇದರ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ, ಗೋ ಪೂಜೆ, ಲಕ್ಷ್ಮಿ ಪೂಜೆ ಹಾಗೂ ಜೈ ಶ್ರೀ ರಾಮ್ ಗೆಳಯ ಬಳಗದ ಸದಸ್ಯರಿಂದ, ಪಾಂಚಜನ್ಯ ಗೆಳೆಯರ ಬಳಗ ಪಂಜಾಳ ಬಂದಾರು , ಶ್ರೀ ಚಕ್ರ ಗೆಳೆಯ ಬಳಗ ಬೊಲ್ಜ ಬಂದಾರು, ನಾಗಶ್ರೀ ಗೆಳೆಯರ ಬಳಗ ಬಂದಾರು, ಸರಸ್ವತಿ ಭಜನೆ ಮಂಡಳಿ ಕುಂಟಲಫಾಲ್ಕೆ ಬಂದಾರು, ದುರ್ಗಾನುಗ್ರಹ ಭಜನ ಮಂಡಳಿ ಮುಗೇರಡ್ಕ ಸದಸ್ಯರಿಂದ ಭಜನೋತ್ಸವ ನೆರವೇರಿತು.

ಕಾರ್ಯಕ್ರಮದ ನಂತರ ಸಾಮೂಹಿಕ ಸಹಭೋಜನ ಕಾರ್ಯಕ್ರಮ ಧರ್ಮಶ್ರೀ ಕುಂಭ ಭವನ ಶ್ರೀ ರಾಮ ನಗರ ಇಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜೈ ಶ್ರೀ ಗೆಳೆಯ ಬಳಗದ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಚಂದಶೇಖರ್, ಗೌರವಧ್ಯಕ್ಷರಾದ ಉದಯ ಬಿ. ಕೆ, ಪ್ರಮುಖರಾದ ಶಿವರಾಮ್, ವಾಸಪ್ಪ, ರಮೇಶ್ ಕುಂಬಾರ, ವಿಶ್ವನಾಥ, ಅಶೋಕ್ ಗೌಡ, ರಾಮಣ್ಣ, ನೊಣಯ್ಯ ಬಾಲಕೃಷ್ಣ, ಪುರಂದರ ಗೌಡ, ಚಂದ್ರ ಹಾಸ ಕುಂಬಾರ, ಲಿಂಗಪ್ಪ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!