22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಡಿರ ಬನದಲ್ಲಿ ನಾಲ್ಕು ನಾಗನ ಕಲ್ಲುಗಳು ಹಾಗೂ ಎರಡು ಮಣ್ಣಿನ ಮಡಕೆ, ಒಂದು ತಿಬಿಲೆ ಪತ್ತೆ

ಕೊಕ್ಕಡ : ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ದೇವಸ್ಥಾನದ ಹತ್ತಿರ ಕಡಿರ ಬನ ಎಂಬಲ್ಲಿ ನಾಗನ ಸಾನಿಧ್ಯ ಇದ್ದು, ನಾಗನ ಬಗ್ಗೆ ಕಂಡು ಬರಲಿಲ್ಲ. ದೇವಸ್ಥಾನದಲ್ಲಿ 2 ವರ್ಷಗಳ ಹಿಂದೆ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ನಾಗತಂಬಿಲ ನೆರವೇರಿಸಲಾಯಿತು. ಆ ಜಾಗ ಸರಕಾರ ಎಂದು ತಿಳಿದು ಬಂದ ಕೂಡಲೇ ಜಿಲ್ಲಾಧಿಕಾರಿಗಳಿಗೆ ಜಾಗವನ್ನು ದೇವಸ್ಥಾನಕ್ಕೆ ಮಾಡಿಕೊಡಬೇಕೆಂದು ಬರೆದುಕೊಳ್ಳಲಾಯಿತು. ಅದರಂತೆ 5ಎಕ್ರೆ ಜಾಗವನ್ನು ಜಿಲ್ಲಾಧಿಕಾರಿಯವರು ಧಾರ್ಮಿಕ ದತ್ತಿ ಇಲಾಖೆಗೆ ಮಂಜೂರುಗೊಳಿಸಿ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.

ದೇವಸ್ಥಾನದ ವತಿಯಿಂದ 12 ದಿನಗಳ ಹಿಂದೆ ಅನುಜ್ಞ ಕಲಶ ನೆರವೇರಿಸಿ ಡಿ.2ರಂದು ಜೀರ್ಣೋದ್ದಾರ ಕೆಲಸ ಪ್ರಾರಂಭಿಸಲಾಯಿತು. ಈ ಸಂಧರ್ಭ ತಂಬೂರಿ ನಾಗ, ನಾಗ, ಕಾಡ್ಯಾ ನಾಗ ಎನ್ನುವ ನಾಲ್ಕು ನಾಗನ ಕಲ್ಲುಗಳು ಹಾಗೂ ನಾಗನ ಉಬ್ಬು ಚಿತ್ರಗಳನ್ನು ಹೊಂದಿದ ಗಟ್ಟಿಮುಟ್ಟಾದ 2ಮಣ್ಣಿನ ಮಡಕೆ, 1ತಿಬಿಲೆ ದೊರೆತಿದೆ. ಜಗನ್ನಿವಾಸ ರಾವ್ ರವರು ಇದು ಸುಮಾರು 500ವರ್ಷಗಳ ಹಿಂದಿನ ವಸ್ತುಗಳು ಹಾಗೂ ಇದು ಬಹಳ ಅಪರೂಪ ಎಂದು ವಿವರಿಸಿದ್ದಾರೆ.

Related posts

ವೇಣೂರು: ಹಂದೇವು ನಿವಾಸಿ ಕಲ್ಯಾಣಿ ದೇವಾಡಿಗ ನಿಧನ

Suddi Udaya

ಉಜಿರೆ ಎಸ್ ಡಿ ಎಂ ಮಹಿಳಾ ಐ.ಟಿ.ಐ. ನಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ

Suddi Udaya

ಉರುವಾಲು: ಕುಪ್ಪೆಟ್ಟಿ ನಿವಾಸಿ ಶ್ರಾವ್ಯ ಜಿ. ಅಸೌಖ್ಯದಿಂದ ನಿಧನ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಗುಣಮಟ್ಟದ ಮಾನದಂಡ ಮಾನ್ಯತಾ ಪ್ರಮಾಣಪತ್ರ

Suddi Udaya

ಪಡಂಗಡಿ: ಗ್ರಂಥಾಲಯ ಸಲಹಾ ಸಮಿತಿಯ ಸಭೆ

Suddi Udaya
error: Content is protected !!