ವಿ. ಹರೀಶ್ ನೆರಿಯ ರವರಿಗೆ ದ್ವಾರಕಾ ಮಯಿ ಮಠ ದಿಂದ “ಭಜಕ ವಿಠಲ ಪ್ರಿಯ ” ಗೌರವ ಪುರಸ್ಕಾರ ಘೋಷಣೆ

Suddi Udaya

ವೇಣೂರಿನಲ್ಲಿ ನಡೆದ ಸುಮಂಗಲಿ ಶ್ರೀ ಸೌಭಾಗ್ಯ ಹಿಂದೂ 300 ಹೆಣ್ಣು ಮಕ್ಕಳಿಗೆ ಉಚಿತ ಮೂಗುತಿ ಧಾರಣ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಜನಾ ಕ್ಷೇತ್ರ ದಲ್ಲಿನ ಸೇವೆಗಾಗಿ ಸಮಿತಿಯ ವತಿಯಿಂದ ವಿ. ಹರೀಶ್ ನೆರಿಯ ರವರಿಗೆ ಗೌರವದ ಸನ್ಮಾನವನ್ನು ನೀಡಿದ ಶ್ರೀ ಸಾಯಿ ಈಶ್ವರ್ ಗುರೂಜಿ ಯವರು ತಮ್ಮ ಮಠದ ವತಿಯಿಂದ ಡಿ.4 ರಂದು ನಡೆಯುವ ಕಾಳ ಭೈರವ ಸ್ವಾಮಿ ಪ್ರತಿಷ್ಠೆ ಮತ್ತು ಗುರುವಂದನಾ ಕಾರ್ಯಕ್ರಮ ದಲ್ಲಿ “ಭಜಕ ವಿಠ್ಠಲ ಪ್ರಿಯ” ಗೌರವ ಪುರಸ್ಕಾರ ವನ್ನು ನೀಡುವುದಾಗಿ ಗಣ್ಯರ ಸಮ್ಮುಖದಲ್ಲಿ ಆಶೀರ್ವದಿಸಿ ನುಡಿದರು.

ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಧಾರ್ಮಿಕ ಪರಿಷತ್ ಸದಸ್ಯರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮತ್ತು ಹಲವು ಗಣ್ಯರು ಶುಭ ಹಾರೈಸಿದರು.

Leave a Comment

error: Content is protected !!